ಮಹಾಂತಪ್ಪರವರ ಕಾರ್ಯ ಮಾದರಿಯಾಗಿದೆ

ಮಹಾಂತಪ್ಪರವರ ಕಾರ್ಯ ಮಾದರಿಯಾಗಿದೆ

ಇಳಕಲ್ಲ:ಒಂದು ಸರಕಾರ ಮಾಡುವಂತ ಕೆಲಸವನ್ನು ಇಳಕಲ್ಲ ಪೂಜ್ಯರಾದ ಲಿಂ. ಡಾ. ಮಹಾಂತಪ್ಪರವರು ಮಾಡಿದರು. ಆದರೇ ಸರಕಾರ ಮಾತ್ರ ತಾನು ಮಾಡಬೇಕಾದ ಕೆಲಸ ಮಾಡಲಿಲ್ಲ. ಶ್ರೀಗಳ ಈ ಕರ‍್ಯ ಇಡೀ ಕರ್ನಾಟಕಕ್ಕೆ ಒಂದು ಮಾದರಿಯಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಅಭಿಪ್ರಾಯ ವ್ಯಕ್ತಡಿಸಿದರು.
ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ಆಡಳಿತ, ಬಾಗಲಕೋಟೆ ಜಿ.ಪಂ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇವರ ಸಹಯೋಗದಲ್ಲಿ ಪ್ರಥಮ ಭಾರಿಗೆ ಪೂಜ್ಯ ಡಾ. ಮಹಾಂತಪ್ಪ ಶಿವಯೋಗಿಗಳ ಹುಟ್ಟು ಹಬ್ಬ ಪ್ರಯುಕ್ತ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಕ್ತರಲ್ಲಿ ದುರಾಚಾರ ದೂರವಾಗಿ ಸದಾಚಾರ ನೆಲೆಗೊಳ್ಳಬೇಕೆಂಬ ಸದುದ್ದೇಶದಿಂದ ಮಹಾಂತಜೋಳಿಗೆ ಹಿಡಿದು ಸುಮಾರು ವರ್ಷಗಳಿಂದ ಹೋರಾಡಿ ಒಂದು ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ಇಲಕಲ್ಲ ಮಠದ ಪೂಜ್ಯ ಮಹಾಂತಪ್ಪಕಾರ್ಯ ರಮಣೀಯವಾಗಿದ್ದು ಎಂದು ಹೇಳಿದರು.

Related