ಸಚಿವ ಸ್ಥಾನ ನೀಡಲು ಮಡಿವಾಳ ಸಮಾಜದ ಮುಖಂಡರು ಒತ್ತಾಯ

ಸಚಿವ ಸ್ಥಾನ ನೀಡಲು ಮಡಿವಾಳ ಸಮಾಜದ ಮುಖಂಡರು ಒತ್ತಾಯ

ದೇವದುರ್ಗ:ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ಪಕ್ಷದ ಮಡಿವಾಳ ಸಮಾಜದ ಮುಖಂಡ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಾಮನೀರ್ದೇಶನ ಸದಸ್ಯ ಬಸವರಾಜ ಮಡಿವಾಳ ಕೊಪ್ಪರ ಅವರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿ, ಕೆ. ಶಿವನಗೌಡ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮಡಿವಾಳ ಸಮಾಜಕ್ಕೆ 10 ಗುಂಟೆ ಜಾಗ ಹಾಗೂ 25 ಲಕ್ಷ ಮೊತ್ತದಲ್ಲಿ ಸಮುದಾಯ ಭವನ ನೀಡಿದ್ದಾರೆ. ಮಡಿವಾಳ ಸಮಾಜಕ್ಕೆ ತಾಲೂಕಿನ ಸರ್ವಜಾತಿಗಳ ಹಿತ ಕಾಯುವ ಕೊಡುಗೈಯಿ ದಾನಿ ಜನಪ್ರಿಯ ಶಾಸಕ ಕೆ.ಶಿವನಗೌಡ ನಾಯಕರಿಗೆ ಸಚಿವಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಗಪ್ಪ ಮೂಷ್ಟೂರು, ಲಿಂಗಯ್ಯ ಸುಣ್ಣದಕಲ್, ಬಸವರಾಜ್ ಕೊಪ್ಪರ್, ಜಯಲಕ್ಷ್ಮಿ ಮಡಿವಾಳ, ಎಚ್.ಮಾಹದೇವ ಮಡಿವಾಳ, ಹನುಮಂತ ಜಾಲಹಳ್ಳಿ, ನಿಂಗು ಕಟಿಗೇರ ಅಮರೇಶ ಮಡಿವಾಳ, ಮೌನೇಶ ಮಾನಸಗಲ್, ಹನುಮಂತ ಜಾಲಹಳ್ಳಿ ಮತ್ತಿತರರು ಇದ್ದರು.

Related