ಅತೃಪ್ತ ಶಾಸಕರಿಗೆ ಆಮಿಷ

ಅತೃಪ್ತ ಶಾಸಕರಿಗೆ ಆಮಿಷ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನರ್ ರಚನೆಯಲ್ಲಿ ತಲೆಕೆಡಿಸಿಕೊಂಡು ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆ ಬದಲಾವಣೆ ಮಾಡಿದರೆ ಬಿಜೆಪಿಯ ಒಂದು ವರ್ಗ ಒಳಗೊಳಗೆ ಖುಷಿಪಡುತ್ತಿದೆ.

ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಿನಿಂದಲೂ ಅವರ ವಿರುದ್ಧವಾಗಿರುವ ಈ ಗುಂಪು ಹಾಗೂ ಅದರ ಸದಸ್ಯರು, ಪ್ರಬಲ ವ್ಯಕ್ತಿಯ ಗೊಂದಲಕಾರಿ ಮಾರ್ಗದಿಂದ ಸಂತೋಷಗೊಂಡಿದ್ದಾರೆ ಎಂದು ಯಡಿಯೂರಪ್ಪ ಆಪ್ತ ಮೂಲಗಳು ಹೇಳಿವೆ.

ಅತೃಪ್ತ ಶಾಸಕರ ಜೊತೆಗೆ ಸಂಪುಟ ಪುನರ್ ರಚನೆ ವೇಳೆ ಸ್ಥಾನ ಸಿಗದೆ ಅಸಂತೋಷಗೊಂಡವರ ಕೋಪ ಮತ್ತಷ್ಟು ಹೆಚ್ಚಾಗಬಹುದೆಂದು ಮುಖ್ಯಮಂತ್ರಿಯ ಕಡೆಯವರು ಆತಂಕ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ, ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದ 17 ಮಂದಿ ಬಂಡಾಯ ಶಾಸಕರಿಗೆ ಸಚಿವ ಸ್ಥಾನದ ಜೊತೆಗೆ ಒಂದಿಷ್ಟು ಆಮಿಷವೊಡ್ಡಿ ಮೈತ್ರಿ ಮಾಡಿಕೊಳ್ಳಲಾಗಿತ್ತು.

Related