ಪತ್ನಿಯ ಪ್ರಿಯಕರನಿಂದಲೇ ಘೋರ ಕೃತ್ಯ

ಪತ್ನಿಯ ಪ್ರಿಯಕರನಿಂದಲೇ ಘೋರ ಕೃತ್ಯ

ಹುಬ್ಬಳ್ಳಿ: ಪತ್ನಿ, ಮಗು ನೋಡಲು ಬಂದು ರಸ್ತೆ ಬದಿಯಲ್ಲೇ ವ್ಯಕ್ತಿಯೊಬ್ಬ ಕೊಲೆಯಾಗಿದ್ದ ಪ್ರಕರಣವನ್ನು 24 ಗಂಟೆಯೊಳಗೆ ಬಯಲಿಗೆಳೆದ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ಹಾನಗಲ್ ನಿವಾಸಿ ಜಗದೀಶ್ ಕೊಲೆಯಾದ ವ್ಯಕ್ತಿ. ಆತನ ಪತ್ನಿಯ ಪ್ರಿಯಕರನೇ ಕೊಲೆ ಆರೋಪಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದರಗುಂಚಿ ಗ್ರಾಮದ ಕಾಶಪ್ಪ ಹಾಗೂ ಜಗದೀಶ್ ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಸಂಬಂಧಕ್ಕೆ ಜಗದೀಶ್ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಊರಿನಿಂದ ಪತ್ನಿ, ಮಗುವನ್ನು ನೋಡಲು ಬಂದಿದ್ದ ಜಗದೀಶನನ್ನು ಹುಬ್ಬಳ್ಳಿ ಹೊರವಲಯದ ಅಂಚಟಗೇರಿ ಚನ್ನಾಪುರ ರಸ್ತೆಗೆ ಕರೆದೊಯ್ದು ವಿಪರೀತ ಮದ್ಯ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಕಾಶಪ್ಪ ಪರಾರಿಯಾಗಿದ್ದಾನೆ. ತನಿಖೆ ಕೈಗೊಂಡ ಪೆÇಲೀಸರು, ಪತ್ನಿಯ ಅಕ್ರಮ ಸಂಬಂಧದ ಕಾರಣ ಜಗದೀಶ್ ಕೊಲೆಯಾಗಿರುವುದನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

Related