ಅರಳಲಿದೆ ಕಮಲ, ಗೆಲ್ಲಲ್ಲಿದೆ ಬೊಮ್ಮನಹಳ್ಳಿ

ಅರಳಲಿದೆ ಕಮಲ, ಗೆಲ್ಲಲ್ಲಿದೆ ಬೊಮ್ಮನಹಳ್ಳಿ

ಬೊಮ್ಮನಹಳ್ಳಿ: HSR ಲೇಔಟ್ ಪರಂಗಿಪಾಳ್ಯವ್ಯಾಪ್ತಿಯಲ್ಲಿ, ವಿಧಾನಸಭಾ ಚುನಾವಣಾ ಹಿನ್ನಲೆ ಈ ಹಿಂದೆ ಕ್ಷೇತ್ರದಲ್ಲಿ ನಡೆದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಂತೆ ಮುಂದೆಯೂ ನಡೆಸುವ ಹಂಬಲವಿದ್ದು, ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಮುಖ್ಯ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನನಗೆ ಮತ ನೀಡಿ, ಕ್ಷೇತ್ರದ ಜನಸೇವೆಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಬೆಂಬಲ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ ಸತೀಶ್ ರೆಡ್ಡಿ ಅವರು ಜನರಲ್ಲಿ ಮತ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಗುರು‌ಮೂರ್ತಿ ರೆಡ್ಡಿ, ಬೆಂ.ದಕ್ಷಿಣ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಆನಂದ್, ಬಿಜೆಪಿ ಮುಖಂಡರಾದ ಸುನಂದಪ್ಪ, ನರಸಿಂಹ ಮೂರ್ತಿ, ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರ ಬಾಂಧವರು ಉಪಸ್ಥಿತರಿದ್ದರು.

Related