ಲಾಭಾಂಶದಿಂದ ಸಾರ್ವಜನಿಕರಿಗೆ ಉಪಯೋಗವಾಗಲಿ

ಲಾಭಾಂಶದಿಂದ ಸಾರ್ವಜನಿಕರಿಗೆ ಉಪಯೋಗವಾಗಲಿ

ದೇವದುರ್ಗ : ಪಟ್ಟಣದಲ್ಲಿರುವ (ಟಿಎಪಿಎಂಸಿ) ಆವರಣದಲ್ಲಿ ಸಣ್ಣಪುಟ್ಟ ಅಂಗಡಿಯ ಬಾಡಿಗೆಯ ಹಣವನ್ನು, ಕೃಷಿ ವ್ಯವಸಾಯ ಮಾರಾಟ ಸಹಕಾರಿ ಸಂಘದಿಂದ ಬರುವ ಲಾಭಾಂಶವನ್ನು ಬಳಸಿಕೊಂಡು ಇನ್ನೂ ಹೆಚ್ಚಿನ ಕಟ್ಟಡಗಳು ನಿರ್ಮಾಣವಾಗುವ ಮೂಲಕ ಸಾರ್ವಜನಿಕರಿಗೆ ಸಹಾಯವಾಗಲೆಂದು ಸೋಮವಾರ ಪಟ್ಟಣದ ಟಿಎಪಿಎಂಸಿಯ ನೂತನ ಮಳಿಗೆಗಳು ಉದ್ಘಾಟನೆ ಮಾಡಿ ಮಾಜಿ ಜಿ.ಪಂ ಸದಸ್ಯರು ಹಾಗೂ ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ಎ.ರಾಜಶೇಖರ ನಾಯಕ ಹೇಳಿದರು.

ಈ ಸಂದರ್ಭದಲ್ಲಿ ಟಿಎಪಿಎಂಸಿ ಅಧ್ಯಕ್ಷ ಲಿಂಗನಗೌಡ ಕೊಪ್ಪರ, ದೇವದುರ್ಗ ಬ್ಲಾಕ್ ಕಾಂಗ್ರೆಸ್‌ಪಕ್ಷದ ಅಧ್ಯಕ್ಷ ಅಬ್ದುಲ್ ಅಜೀಜ್, ಗಂಗಪ್ಪಯ್ಯ ಪೂಜಾರಿ, ಶರಣಗೌಡ ಕಮತಗಿ, ಚನ್ನಬಸವ ಪಾಮರ್ತಿ, ವಿಎಸ್‌ಎಸೆನ್ ಅಧ್ಯಕ್ಷ ನಾಗರಾಜ ಪಾಟೀಲ್, ಸತೀಶ್ ಬಂಡೆಗುಡ್ಡ, ಬಸವಂತ್ರಾಯಗೌಡ ಶಾವಂತಗೆರಾ, ಗೋವಿಂದರಾಜ ನಾಯಕ ಕೊತ್ತದೊಡ್ಡಿ, ಸುರೇಶ ಚಿಂತಲಕುಂಟಾ ಹಾಗೂ ಟಿಎಪಿಎಂಸಿಯ ಅಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿಯವರು ಮತ್ತಿತರರಿದ್ದರು.

Related