ಆರೋಗ್ಯ ಕೇಂದ್ರಕ್ಕೆ ಶಾಸಕ ಚಾಲನೆ

ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಂಗಮ್ಮನಪಾಳ್ಯ ನಗರದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಶಾಸಕ ಎಂ. ಸತೀಶ್‌ರೆಡ್ಡಿ ಸೋಮವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೊರೋನಾ ಹಿನ್ನೆಲೆ ಪ್ರತಿಯೊಬ್ಬ ವ್ಯಕ್ತಿಗೆ ಆರೋಗ್ಯ ಮುಖ್ಯವಾಗಿದ್ದು. ಈ ಭಾಗದ ಮಧ್ಯಮ ವರ್ಗದ ಜನರಿಗೆ ಅನೂಕೂಲವಾಗಲು, ಕೋವಿಡ್ ಮತ್ತು ಇತರ ಕಾಯಿಲೆ ಪರೀಕ್ಷಿಸಲು ಬಿಬಿಎಂಪಿ ವತಿಯಿಂದ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 9 ವಾರ್ಡ್ ಗಳ ಪೈಕಿ  6ವಾರ್ಡ್ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಉಳಿಕೆ 3 ವಾರ್ಡ್ ಳಾದ ಮಂಗಮ್ಮನಪಾಳ್ಯ, ಪುಟ್ಟನಹಳ್ಳಿ, ಜರಗನಹಳ್ಳಿ ವಾರ್ಡ್ ಗಳಲ್ಲಿ ಹೊಸ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರ್ಯಕ್ರಮದಲ್ಲಿ ಜಂಟಿ ಆಯ್ತುಕ ರಾಮಕೃಷ್ಣ, ಡಾ.ಸುರೇಶ್, ಡಾ.ನಾಗೇಂದ್ರ, ಬಿಜೆಪಿ ಮುಖಂಡರುಗಳಾದ ಗೋಪಿನಾಥ್‌ರೆಡ್ಡಿ, ಸೈಯದ್‌ಸಲಾಂ, ಶ್ರೀನಿವಾಸ್‌ರೆಡ್ಡಿ, ಶ್ರೀನಿವಾಸ್‌ಗೌಡ, ಚಂದ್ರಪ್ಪರೆಡ್ಡಿ ಮುಂತಾದವರು ಭಾಗವಹಿಸಿದರು.

Related