ಮಠಕ್ಕೆ ಭೇಟಿ ನೀಡಿದ ನಾಯಕರು

ಮಠಕ್ಕೆ ಭೇಟಿ ನೀಡಿದ ನಾಯಕರು

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದಿನಿಂದ ಹಾನಗಲ್ ಚುನಾವಣಾ ಪ್ರಚಾರದ ಅಕಾಡಕ್ಕೆ ಧುಮುಕಿದರು.

ಹುಬ್ಬಳ್ಳಿಯಿಂದ ಈ ಇಬ್ಬರು ನಾಯಕರು ಒಂದೇ ವಾಹನದಲ್ಲಿ ಹಾನಗಲ್ಲಿನ ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿದರು.

ಬಹಿರಂಗ ಪ್ರಚಾರ ಆರಂಭಕ್ಕೂ ಮುನ್ನ ಬೊಮ್ಮನಹಳ್ಳಿಯ ಶ್ರೀ ಗುರುಪಾದೇಶ್ವರ ವಿರಕ್ತ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಶುಭಾಶೀರ್ವಾದಗಳನ್ನು ಪಡೆದರು.

Related