ಕೇಂದ್ರಕ್ಕೆ ಇದು ಕೊನೆಯ ಅವಕಾಶ ಎಂದ ಸುಪ್ರೀಂ

ಕೇಂದ್ರಕ್ಕೆ ಇದು ಕೊನೆಯ ಅವಕಾಶ ಎಂದ ಸುಪ್ರೀಂ

ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಮೂರು ತಿಂಗಳುಗಳ ಕಾಲ ಗ್ರಾಹಕರಿಗೆ ಸಾಲ ಮರುಪಾವತಿಯಲ್ಲಿ ವಿನಾಯಿತಿ ನೀಡಿದ್ದ ಸರ್ಕಾರಕ್ಕೆ ಇದರ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ.

ಇಎಂಐ ಗ್ರಾಹಕರು ಅನುಕೂಲವಾಗುವ ರೀತಿ ಕೇಂದ್ರ ಸರ್ಕಾರ ನೀಡಿದ್ದ ಮೊರಾಟೋರಿಯಂ ಕುರಿತು ಒಂದು ಉತ್ತಮ ನಿರ್ಧಾರಕ್ಕೆ ಬನ್ನಿ, ಎರಡು ವಾರಗಳಲ್ಲಿ ಏನಾಗಲಿದೆ?…ಕೇಂದ್ರಕ್ಕೆ ಎರಡು ವಾರಗಳ ಗಡುವು ನೀಡಲಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಒಂದೊಳ್ಳೆ ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದು ಸುಪ್ರೀಂ ಹೇಳಿದೆ.

ಆರ್‍ಬಿಐ ಹಾಗೂ ಸರ್ಕಾರಕ್ಕೆ ಇದು ಕೊನೆಯ ಅವಕಾಶವಾಗಿದ್ದು, ಚರ್ಚಿಸಿ ಆದಷ್ಟು ಬೇಗ ಹೇಳಬೇಕೆಂದು ಸುಪ್ರೀಂ ಸೂಚಿಸಿದೆ.

Related