ಮೇಡಹಳ್ಳಿಯ ಎಂ ಕೃಷ್ಣಮೂರ್ತಿಯವರಿಂದ ಗಣೇಶ ಮೂರ್ತಿ ವಿತರಣೆ

ಮೇಡಹಳ್ಳಿಯ ಎಂ ಕೃಷ್ಣಮೂರ್ತಿಯವರಿಂದ ಗಣೇಶ ಮೂರ್ತಿ ವಿತರಣೆ

ಬೆಂಗಳೂರು: ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ  ಸಮಾಜ ಸೇವಕ ಹಾಗೂ ಬಿಜೆಪಿ ಮುಖಂಡರಾದ ಮೇಡಹಳ್ಳಿ ಎಂ ಕೃಷ್ಣಮೂರ್ತಿ ರವರು ವಾಡ್೯ನ ಸಾರ್ವಜನಿಕರಿಗೆ ಇಂದು ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಿಸಿದರು.

ಹಲವಾರು ವರ್ಷಗಳಿಂದ ಕೃಷ್ಣಮೂರ್ತಿಯವರು ಮೇಡಹಳ್ಳಿಯಲ್ಲಿ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ ಅದೇ ರೀತಿ ಇಂದು ಕೂಡ ಮೆಡಹಳ್ಳಿಯ ಜನತೆಗೆ ಪರಿಸರ ಸ್ನೇಹಿ ಯಾದ ಗಣೇಶನ ಮೂರ್ತಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ನಾರಾಯಣಪ್ಪ, ಜಗದೀಶ್, ರಮೇಶ್, ಖರೀಂಪಾಷ, ಮಾಲೀಕ್, ಸುಭ್ರಮಣಿ, ಮುನಿರಾಜು, ಕಾಂತರಾಜು, ಭರತ್ ಮತ್ತಿತರರು  ಉಪಸ್ಥಿತರಿದ್ದರು.

Related