ಕುಟುಂಬ ದ್ವೇಷಕ್ಕೆ ಮೂಖಪ್ರಾಣಿಯ ಹಿಂಸೆ

ಕುಟುಂಬ ದ್ವೇಷಕ್ಕೆ ಮೂಖಪ್ರಾಣಿಯ ಹಿಂಸೆ

ಕುಕನೂರ: ಕರುಣೆ ಇಲ್ಲದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಹಾಗೂ ಇನ್ನೊಬ್ಬರ ಮೇಲಿರುವ ದ್ವೇಷಕ್ಕಾಗಿ ಏನು ಬೇಕಾದರೂ ಮಾಡಬಹುದು ಆದರೆ ದೊಡ್ಡ ದುರಂತವೆಂದರೆ ಬಾಯಿ ಇಲ್ಲದ ಮೂಖ ಪ್ರಾಣಿ ಎತ್ತಿನ ಬಾಲವನ್ನೇ ಕಟ್ ಮಾಡಿದ್ದಾರೆ ಎಂದರೆ ನಿಜಕ್ಕೂ ಇದೊಂದು ಹೀನಕೃತ್ಯ ಎನ್ನಬಹುದು. ಇಂತಹ ಒಂದು ಘಟನೆ ಕುಕನೂರ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಈರಪ್ಪ ಹನುಮಂತಪ್ಪ ಹಿರೇಮನಿ ಎನ್ನುವ ರೈತನಿಗೆ ಸೇರಿದ ಎತ್ತುಗಳಾಗಿದ್ದು ಶನಿವಾರದಂದು ಪ್ರತಿದಿನ ಕಟ್ಟುವಂತೆ ಎತ್ತುಗಳನ್ನು ಹೊರಗಡೆ ಕಟ್ಟಲಾಗಿತ್ತು. ಕಾಲೋನಿಯಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಎಲ್ಲರೂ ಮಗ್ನರಾಗಿದ್ದರು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಿಡಿಗೇಡಿಗಳು ಬೆಳಿಗ್ಗೆ ಹತ್ತು ಘಂಟೆಯ ಸುಮಾರಿಗೆ ಏನು ಅರಿಯದ ಮೂಖ ಪ್ರಾಣಿ ಹಾಗೂ ತುಂಬಾ ಬೆಲೆ ಬಾಳುವ ಎತ್ತಿನ ಬಾಲವನ್ನು ಕಟ್ ಮಾಡಿದ್ದಾರೆ. ಇಂತಹ ಕೃತ್ಯ ಎಸಗಿದವರು ಯಾರೇ ಆಗಿರಲಿ ಅಂತವರಿಗೆ ಶಿಕ್ಷೆಯಾಗಲಿ ಹಾಗೂ ತಮ್ಮ ತಮ್ಮ ದ್ವೇಷಗಳು ಇದ್ದರೆ ಮನುಷ್ಯ ಮನುಷ್ಯರಲ್ಲೇ ಇರಲಿ ಮೂಖ ಪ್ರಾಣಿಯ ಮೇಲಲ್ಲಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ನಮ್ಮ ಕುಟುಂಬದ ಮೇಲಿನ ದ್ವೇಷಕ್ಕೆ ಈ ಘಟನೆ ನಡೆದಿರುವದು ನಮಗೆ ಕಂಡು ಬಂದಿದ್ದು ಹಾಗೂ ಬೆಳಗಿನ ಸಮಯದಲ್ಲಿ ಬೇರೆ ಕಡೆಯಿಂದ ಬಂದು ಇಂತಹ ಕೃತ್ಯ ಮಾಡಲು ಸಾದ್ಯವಿಲ್ಲಾ ಇದು ಇಲ್ಲಿಯವರ ಕೈವಾಡವೇ ಎನ್ನುವ ಅನುಮಾನ ಮೂಡಿದೆ.

Related