ಕೆಂಪೇಗೌಡರ ಜಯಂತಿ ಆಚರಣೆ – ಸಚಿವ ಕೆ. ಗೋಪಾಲಯ್ಯ

ಕೆಂಪೇಗೌಡರ ಜಯಂತಿ ಆಚರಣೆ – ಸಚಿವ ಕೆ. ಗೋಪಾಲಯ್ಯ

ಬೆಂಗಳೂರು : ಕೆಂಪೇಗೌಡರ ಅಶ್ವಾರೂಢ ಕಂಚಿನ ಪ್ರತಿಮೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ರವರು ಮಾಲಾರ್ಪಣೆ ಮಾಡಿದರು.

ನಾಗಪುರ ವಾರ್ಡ್ ನಂ. 67 ಶಾಸಕರ ಭವನದಲ್ಲಿ ಬಿಬಿಎಂಪಿಯಿಂದ ಆಯೋಜಿಸಿದ್ದ ಮಹಾನಗರ ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಿಸಿ ಮಾತನಾಡಿದ ಸಚಿವರು ವಿಶ್ವಕ್ಕೆ ಐಟಿ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದು ಕರೆಯುವ ಬೆಂಗಳೂರನ್ನ ಕಟ್ಟಿದ್ದು ನಮ್ಮ ಹೆಮ್ಮೆಯ ಪ್ರತೀಕ, ಕೆಂಪೇಗೌಡರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಎಸ್ ಹರೀಶ್, ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪಾಲಿಕೆ ಸದಸ್ಯ ಕೆ ವಿ ರಾಜೇಂದ್ರಕುಮಾರ್, ಬೆಂಗಳೂರು ಉತ್ತರ ಬಿಜೆಪಿ ಉಪಾಧ್ಯಕ್ಷ ಎನ್ ಜಯರಾಮ್, ಹನುಮಂತ ರಾಯಪ್ಪ, ನಿಸರ್ಗ ಜಗದೀಶ್, ಸ್ಥಳೀಯ ಮುಖಂಡರುಗಳು, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.

Related