ಕೆಂಪಣ್ಣ ಅವರು ಭಯಪಡೋ ಅವಶ್ಯಕತೆ ಇಲ್ಲ: ಡಿಸಿಎಂ

 ಕೆಂಪಣ್ಣ ಅವರು ಭಯಪಡೋ ಅವಶ್ಯಕತೆ ಇಲ್ಲ: ಡಿಸಿಎಂ

ಬೆಂಗಳೂರು: ಗುತ್ತಿಗೆದಾರರ ಅಧ್ಯಕ್ಷರಾಗಿರುವಂತಹ ಕೆಂಪಣ್ಣ ಅವರು ಇಂದು ಬಿಲ್ ಬಾಕಿ ಇರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮುಂದಿನ 30 ದಿನಗಳ ಒಳಗೆ ಬಿಲ್ ಪಾವತಿ ಮಾಡದೆ ಹೋದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು 30 ದಿನಗಳ ಗಡುವು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಎನ್ ಕ್ವೈರಿ ಪೆಂಡಿಂಗ್ ಇದ್ರು 60-70% ಏನು ಬಿಲ್ ಇತ್ತು, ಬಿಲ್ ಗಳನ್ನೆಲ್ಲಾ ರಿಲೀಸ್ ಮಾಡಿದ್ದೀವಿ ಪ್ರಯಾರಿಟಿ ಮೇಲೆ ಬಿಲ್ ಕೊಟ್ಟಿದ್ದೇವೆ, ಕೆಂಪಣ್ಣ ಅವರು ಭಯ ಪಡೊ ಅವಶ್ಯಕತೆ ಇಲ್ಲ ಅವರ ಏನೇ ಸಮಸ್ಯೆ ಇದ್ರು ಬಂದು ಹೇಳಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದರು.

ಹಾಗೆ IT ರೈಡ್ ಗೆ ರಾಜಕೀಯ ಲಿಂಕ್ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಾಲಿಟಿಕ್ಸ್ ಇಲ್ಲದೆ IT ಅವರು ಬರೋದೆ ಇಲ್ಲ,  ಪಾಲಿಟಿಕ್ಸೇ ನಡಿತಿರೋದು ನಮಗೂ ಗೊತ್ತಿದೆ. ಛತ್ತೀಸ್ಗಢ, ತೆಲಂಗಾಣ ಸೇರಿ ಎಲ್ಲೆಲ್ಲಿ ಏನು ನಡೀತಿದೆ ಗೊತ್ತಿದೆ ಬಿಜೆಪಿಯವರು ಇರೋ ಕಡೆ IT ರೈಡ್ ನಡೆಯಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.

 

Related