‘ಕೇಜ್ರಿವಾಲ್ ಉಗ್ರಗಾಮಿ’ ಎಂದ ಕೇಂದ್ರ ಸಚಿವ

‘ಕೇಜ್ರಿವಾಲ್ ಉಗ್ರಗಾಮಿ’ ಎಂದ ಕೇಂದ್ರ ಸಚಿವ

ನವದೆಹಲಿ, ಫೆ. 3 : ದಿಲ್ಲಿ ವಿಧಾನಸಭಾ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದ್ದಂತೆ ಪ್ರಚಾರ ಕಣದಲ್ಲಿ ಆಕ್ಷೇಪಾರ್ಹ, ವಿವಾದಾತ್ಮಕ ಹೇಳಿಕೆಗಳು ವಿಜೃಂಭಿಸುತ್ತಿವೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ರನ್ನು ಭಯೋತ್ಪಾದಕ ಎಂದು ಕರೆದ ಸಂಬಂಧ ಈಗಾಗಲೇ ಬಿಜೆಪಿ ಸಂಸದರೊಬ್ಬರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಇದೀಗ ಕೇಂದ್ರ ಸಚಿವರೇ ಕೇಜ್ರಿವಾಲ್ರನ್ನು ಉಗ್ರಗಾಮಿ ಎಂದು ಕರೆದಿದ್ದಾರೆ. ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್
, “ಅರವಿಂದ ಕೇಜ್ರಿವಾಲ್ರಿಂದ ದಿಲ್ಲಿಯ ಮತದಾರರು ದೂರ ಹೋಗಿದ್ದಕ್ಕೆ ಕಾರಣವಿದೆ. ಕೇಜ್ರಿವಾಲ್ ಮುಗ್ಧನ ಮುಖ ಮಾಡಿ – ‘ನಾನು ಭಯೋತ್ಪಾದಕನಾ?’ ಎಂದು ಕೇಳುತ್ತಾರೆ. ನೀವು ಭಯೋತ್ಪಾದಕ, ಇದಕ್ಕೆ ಸಾಕಷ್ಟು ಪುರಾವೆಗಳಿವೆ. ನೀವೇ ನಾನೊಬ್ಬ ಅರಾಜಕವಾದಿ ಎಂದಿದ್ದೀರಿ. ಅರಾಜಕವಾದಿ ಮತ್ತು ಭಯೋತ್ಪಾದಕನ ನಡುವೆ ಅಂಥಹ ವ್ಯತ್ಯಾಸವೇನೂ ಇಲ್ಲ,” ಎಂದು ಹೇಳಿದ್ದಾರೆ.

Related