ಯಾದಗಿರಿ : ಸುರಪುರ ತಾಲೂಕಿನ ಖಾನಾಪೂರ ಎಸ್.ಎಚ್ ಗ್ರಾಮದಲ್ಲಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಜನರ ಸಮಸ್ಯೆ ಕೇಳುವ ಬದಲು ಕೇವಲ ಮಳಿಗೆಗಳ ಉದ್ಘಾಟನೆ ಮಾಡುವ ಮೂಲಕ ಕಾಟಾಚಾರದ ಗ್ರಾಮ ವಾಸ್ಥವ್ಯ ಮಾಡಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿ.ಪಂ ಸಿಇಓ ಶಿಲ್ವಾ ಶರ್ಮಾ ಗೈರಾಗಿದ್ದು, ಜನರ ಸಮಸ್ಯೆ ಆಲಿಸದೇ ಮಳಿಗೆಗಳ ಉದ್ಘಾಟನೆಗಾಗಿ ಸೀಮಿತವಾದ ಕಾರ್ಯಕ್ರಮ ಇದಾಗಿದೆ ಎನ್ನಲಾಗಿದೆ.
ಈ ವೇಳೆ ಶಾಸಕ ರಾಜೂಗೌಡ, ಎಸ್ಪಿ ಋಷಿಕೇಶ್ ಸೋನವಾಣೆ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಜಿ.ಪಂ ಅಧ್ಯಕ್ಷ ಬಸನಗೌಡ ಯಡಿಯಾಪೂರ ಉಪಸ್ಥಿತರಿದ್ದರು.