ಇಂದಿನಿಂದ ಕಾಟೇರನ ಅಬ್ಬರ

ಇಂದಿನಿಂದ ಕಾಟೇರನ ಅಬ್ಬರ

ಬೆಂಗಳೂರು: ಇಂದಿನಿಂದ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸದ್ದು ಮಾಡಲು ಹೊರಟಿರುವ ಕಾಟೇರ ಚಿತ್ರ ಕರ್ನಾಟಕದಾದ್ಯಂತ ರಿಲೀಸ್ ಆಗಿದ್ದು, ದಚ್ಚು ಅಭಿಮಾನಿಗಳು ತೆರೆ ಮೇಲೆ ಕಾಟೇರನನ್ನು ನೋಡಿ ಅಭಿಮಾನಿಗಳು ಹಾಡಿ ಹೊಗಳಿದ್ದಾರೆ.

ಹೌದು, ನಟ ದರ್ಶನ್ ತೂಗುದೀಪ ರವರ ಕಾಟೇರ ಚಿತ್ರ ಇಂದು ರಾಜದಾದ್ಯಂತ ಬಿಡುಗಡೆಗೊಂಡಿದ್ದು ಈ ಚಿತ್ರವನ್ನು ನೋಡಿದ ದರ್ಶನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಡಿಸೆಂಬರ್ 28 ಮಧ್ಯರಾತ್ರಿಯಿಂದಲೇ ಕಾಟೇರ ಚಿತ್ರ ತೆರೆ ಮೇಲೆ ಅಪ್ಪಳಿಸಿದ್ದು ಮಧ್ಯರಾತ್ರಿಯಿಂದಲೇ ಚಿತ್ರ ನೋಡಿದ ಅಭಿಮಾನಿಗಳು ದರ್ಶನ್ ಕಟ್ ಔಟ್ ಹಾಕಿ ಹಾಲಿನ ಅಭಿಷೇಕ ತೆಂಗಿನ ಕಾಯಿ ಹೊಡೆದು ನೆಚ್ಚಿನ ನಾಯಕನ ಚಿತ್ರವನ್ನು ನೋಡಿ ಸಂಭ್ರಮ ಆಚರಣೆ ಮಾಡಿದ್ದಾರೆ.

ಯೆಸ್…ಡಿ. ಬಾಸ್‌ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಇಂದು ರಿಲೀಸ್ ಆಗಿದೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪರ್ಫೆಕ್ಟ್ ಗಿಫ್ಟ್ ಸಿಕ್ಕಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಸಿನಿಮಾ ನೋಡಿ ಹೊರ ಬಂದ ಬಳಿಕ ಅಭಿಮಾನಿಗಳು ತಮ್ಮ ವಿಮರ್ಶೆ ತಿಳಿಸಿದ್ದಾರೆ. ‘ಅದ್ಭುತ ಸಿನಿಮಾ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಒಳ್ಳೆಯ ಸಿನಿಮಾ ಕೊಟ್ಟ ಡಿ ಬಾಸ್​ಗೆ ಧನ್ಯವಾದ’ ಎಂದಿದ್ದಾರೆ. ದರ್ಶನ್ ನಟನೆಯನ್ನು ಕೆಲವರು ಹಾಡಿ ಹೊಗಳಿದ್ದಾರೆ.

Related