ರೈತರ ಹೋರಾಟಕ್ಕೆ ಕರ್ನಾಟಕ ಬೆಂಬಲ

  • In State
  • August 27, 2021
  • 636 Views
ರೈತರ ಹೋರಾಟಕ್ಕೆ ಕರ್ನಾಟಕ ಬೆಂಬಲ

ಚಿಂಚೋಳಿ : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ದೆಹಲಿ ಚಲೋ ಪಾದಯಾತ್ರೆಯನ್ನು ಬಾಗಲಕೋಟ ನವನಗರದ ನಿವಾಸಿ ನಾಗರಾಜ್ ಕೆ ಹಮ್ಮಿಕೊಂಡಿದರು. ಬಸವೇಶ್ವರ ಸರ್ಕಲ್‌ಗೆ ಆಗಮಿಸಿದ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಮಲಿ ಶುಕ್ರವಾರ ಸನ್ಮಾನಿಸಿದ್ದಾರೆ. ಪಾದಯಾತ್ರೆ ಚಾಮರಾಜನಗರದಿಂದ ಆರಂಭಗೊಳ್ಳಲಿದ್ದು, ಎಲ್ಲಾ ಜಿಲ್ಲೆಯ ರೈತರು ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ಕಾಂಗ್ರೆಸ್ ಮುಖಂಡ ಶ್ರೀ ಸೈಯದ್ ಶಬ್ಬೀರ್, ಪುರಸಭೆ ಉಪಾಧ್ಯಕ್ಷ ಶಿವರಾಜ್ ಪಾಟೀಲ್, ಖ ಗಣಪತರಾವ್, ಸುಭಾಷ್ ಚಂದ್ರ ಪಾಟೀಲ್, ಖಲೀಲ್ ಪಟೇಲ್, ಬಸವರಾಜ್ ಕಡಬೂರ್, ಅಯೂಬ್ ಖಾನ್, ಹಾದಿಸಾಬ್, ನಾಗೇಶ್ ಗುಣಾಜಿ, ಉಲ್ಲಾಸ್ ಕೆರಳ್ಳಿ, ಸುನಿಲ್ ದೊಡ್ಡಮನಿ, ಯಲ್ಲಾಲಿಂಗ ಕಮಲಾಕರ್, ನವೀನ್ ಕಿವುನೂರ್, ಅನೀಲ್ ಕಟ್ಟಿ, ವೆಂಕಟೇಶ್ ದುದ್ದ್ಯಾಲ್, ಸೋಮಶೇಖರ್ ಕರಕಟ್ಟಿ, ಶೇಕ್ ಫರೀದ್, ಶಂಕರ್ ಕುಸಾಳೆ, ರಘು ದಳಪತಿ, ಗಂಗಾಧರ ಗಡ್ಡಿಮನಿ, ಚಾಂದ್ ಪಾಶ ಇನ್ನಿತರರಿದ್ದರು.

Related