ರಾಜ್ಯ ಸರ್ಕಾರ ಎಲ್ಲಿದೆ?

ರಾಜ್ಯ ಸರ್ಕಾರ ಎಲ್ಲಿದೆ?

ಮಂಡ್ಯ: ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಆರೋಗ್ಯ ಸಚಿವರು ಶ್ರೀರಾಮುಲು, ಡಾ.ಕೆ ಸುಧಾಕರ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಬೆಂಗಳೂರಿನಲ್ಲೇ ಕೊರೋನಾ ತಡೆಗಟ್ಟಲು ಸಾಧ್ಯವಾಗಿಲ್ಲ. ಇನ್ನು ಹಳ್ಳಿಗಳಲ್ಲಿ ಕೊರೋನಾ ತಡೆಗಟ್ಟಲು ಹೇಗೆ ಸಾಧ್ಯವಾಗುತ್ತದೆ ಎಂದು ಸಚಿವರ ವಿರುದ್ಧ ಶಾಸಕ ಡಾ.ಕೆ.ಅನ್ನದಾನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಸಿಎಂ ಕಚೇರಿ ಕೃಷ್ಣದಲ್ಲೇ ಕೊರೋನಾ ಕಾಣಿಸಿಕೊಂಡಿದೆ. ಹೀಗಾದರೆ ಇನ್ನು ಗ್ರಾಮೀಣ ಪ್ರದೇಶಗಳಲ್ಲಿನ ಜನರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ. ನಾವು ಶಾಸಕರು ಹಗಲು ರಾತ್ರಿ ದುಡಿಯುವುದಕ್ಕೆ ತಯಾರಿದ್ದೇವೆ.. ಹಳ್ಳಿಗಳಿಗೆ ಕೊರೋನಾ ಹರಡುತ್ತಿರುವುದನ್ನ ತಕ್ಷಣವೇ ತಡೆಯುವ ಜವಾಬ್ದಾರಿಯನ್ನ ಸರ್ಕಾರ ಹೊರಬೇಕು ಎಂದು ಒತ್ತಾಯಿಸಿದರು.

Related