ಬೊಮ್ಮನಹಳ್ಳಿಲ್ಲಿ ಜನ ಸ್ಪಂದನ ಸಭೆ

ಬೊಮ್ಮನಹಳ್ಳಿಲ್ಲಿ ಜನ ಸ್ಪಂದನ ಸಭೆ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರುವಂತಹ ಅರಕೆರೆ ವಾರ್ಡ್, ಶಾಂತಿನಿಕೇತನ ಲೇಔಟ್ ಹಾಗೂ ಅವನಿಶೃಂಗೇರಿ ನಗರ ವ್ಯಾಪ್ತಿಯಲ್ಲಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಜನ ಸ್ಪಂದನ ಸಭೆ ನಡೆಸಿದರು.

ವಲಯ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳೀಯರ ಸಮಸ್ಯೆಗಳನ್ನ ಆಲಿಸಿ, ಕೆಲ ಸಮಸ್ಯೆಗಳನ್ನ ಸ್ಥಳದಲ್ಲೇ ಬಗೆಹರಿಸಿ, ಇನ್ನೂ ಕೆಲವು ಸಮಸ್ಯೆಗಳನ್ನ ಶೀಘ್ರದಲ್ಲೇ ಬಗೆಹರಿಸುವುದಾಗಿ ಶಾಸಕ ಸತೀಶ್ ರೆಡ್ಡಿ ಭರವಸೆ ನೀಡಿದರು.

ಈ ಸಂದರ್ಬದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಅಜಿತ್, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಪುರುಷೋತ್ತಮ ರವಿ, ಮಾಜಿ ನಗರಸಭಾ ಸದಸ್ಯರಾದ ಮುರಳಿ, ಬಿಜೆಪಿ ವಾರ್ಡ್ ಪ್ರಸಿಡೆಂಟ್ ಮಂಜುನಾಥ್ ಇ.ಇ. ಪಾಪಯ್ಯ ರೆಡ್ಡಿ, ಹೆಲ್ತ್ ಆಫೀಸರ್ ಡಾಕ್ಟರ ನಾಗೇಂದ್ರ ,ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯ ನಿವಾಸಿಗಳು ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತಿ ಹೊಂದಿದ್ದರು.

Related