ಐಟಿ ಬಿಟಿ ಕಂಪನಿಗಳು ಬೆಂಗಳೂರಿಗೆ ಇಂದು ನಿನ್ನೆ ಬಂದಿದ್ದಲ್ಲ: ಶಾಸಕ ಎಂ ಸತೀಶ್ ರೆಡ್ಡಿ

ಐಟಿ ಬಿಟಿ ಕಂಪನಿಗಳು ಬೆಂಗಳೂರಿಗೆ ಇಂದು ನಿನ್ನೆ ಬಂದಿದ್ದಲ್ಲ: ಶಾಸಕ ಎಂ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಉದ್ಯಮಿ ಮೋಹನ್ ದಾಸ್ ಪೈ ಬಗ್ಗೆ ನಮಗೆ ಗೌರವ ಇದೆ, ಆದರೆ ಐಟಿ ಬಿಟಿ ಕಂಪನಿಗಳು ಬೆಂಗಳೂರಿಗೆ ಇಂದು ನಿನ್ನೆ ಬಂದಿದ್ದಲ್ಲ, ನೂರಾರು ವರ್ಷಗಳಿಂದ ಬೆಂಗಳೂರಿನಲ್ಲಿ ಐಟಿ ಕಂಪೆನಿಗಳು ಇವೆ, ಮಳೆ ಹೆಚ್ಚಾಗಿ ಆಗಿದ್ದು ಪಕೃತಿ ವಿಕೋಪದಿಂದ ಈ ತೊಂದರೆ ಆಗಿದೆ, ಮೆಟ್ರೋ ಕಾಮಗಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ, ಇದರಿಂದಾಗಿ ಕೆಲವು ಕಡೆ ಸಮಸ್ಯೆ ಆಗಿದೆ.

ಬೇರೆ ರಾಜ್ಯಗಳಲ್ಲಿ ಮಳೆಯಿಂದ ಅಪಾರ ಹಾನಿಯಾಗಿದೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಷ್ಟೊಂದು ತೊಂದರೆ ಎದುರಾಗಿಲ್ಲ ಎಂದರು.

ಬೆಂಗಳೂರಿನಲ್ಲಿರುವ ಪರಿಸರ ಯಾವುದೇ ರಾಜ್ಯಗಳಲ್ಲಿ ಇಲ್ಲ, ಆಂಧ್ರ ತೆಲಂಗಾಣದಲ್ಲಿ ಐಟಿಬಿಟಿಗೆ ಪೂರಕವಾಗಿಲ್ಲ, ಬೆಂಗಳೂರಿನಲ್ಲಿರುವ ಮೂಲಭೂತ ಸೌಕರ್ಯಗಳನ್ನು ನೋಡಿ ಐಟಿಬಿಟಿ ಬಂದಿದೆ, ಇಂತಹ ಮೂಲಭೂತ ಸೌಕರ್ಯ ಹಾಗೂ ಪರಿಸರ ಬೇರೆಲ್ಲೂ ಇಲ್ಲ. ಸಮಸ್ಯೆಗಳನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ವಿಧಾನಸಭೆಯ ಮುಖ್ಯ ಸಚೇತಕ ಎಂ ಸತೀಶ್ ರೆಡ್ಡಿ ಹೇಳಿದ್ದಾರೆ.

 

Related