ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಹಿಂದುಗಳ ವೋಟ್ ಪಡೆಯಲು ರಾಮನ ಹೆಸರಿನಲ್ಲಿ ಬಿಜೆಪಿ ನಾಯಕರುಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಆರ್ ಬಿ ತಿಮ್ಮಾಪುರ ಅವರು ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಕೇವಲ ರಾಮ ಮಾತ್ರ ದೇವರಾ? ನಮ್ಮ ದೇಶದಲ್ಲಿ ಸಾವಿರಾರು ಹಿಂದೂ ದೇವಾಲಯಗಳಿವೆ ಅವಲ್ಲವೂ ನಿಮಗೆ ದೇವರಲ್ಲವೇ ಕೇವಲ ರಾಮ ಮಾತ್ರ ದೇವರ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರಿಗೆ ಹಳ್ಳಿಯಲ್ಲಿರುವಂತಹ ದೇವರುಗಳು ಕಾಣುವುದಿಲ್ಲ ಕೇವಲ ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ಬಿಜೆಪಿ ಅವರಿಗೆ ಕಣ್ಣಿಗೆ ಕಾಣುತ್ತದೆ ಎಂದು ಬಿಜೆಪಿಯವರ ವಿರುದ್ಧ ಗುಡುಗಿದ್ದಾರೆ.
ನಮ್ಮ ನಿಮ್ಮೆಲ್ಲರ ಹಳ್ಳಿಯಲ್ಲಿರುವ ದುರ್ಗವ್ವ, ದ್ಯಾಮವ್ವ, ಕಾಳವ್ವ, ಹನುಮಂತ ಇವರೆಲ್ಲರೂ ಹಿಂದೂ ದೇವರೇ ಅಲ್ಲವೇ ಕೇವಲ ಅಯೋಧ್ಯದಲ್ಲಿರುವ ರಾಮ ಮಾತ್ರ ಹಿಂದೂ ದೇವರಲ್ಲ ಎಂದಿದ್ದಾರೆ.
ಹಳ್ಳಿಯಲ್ಲಿರುವ ದೇವರು ಬಿಜೆಪಿಯವರಿಗೆ ಕಾಣಿಸುವುದಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಮನ ಹೆಸರಿನಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ ಎಂದರು.
ಬಿಜೆಪಿಯವರಿಗೆ ನರೇಂದ್ರ ಮೋದಿ ಅವರೇ ದೇವರು. ಅವರಿಗೆ ಹಳ್ಳಿಗಳಲ್ಲಿರುವ ದೇವರು ಕಾಣಿಸುವುದಿಲ್ಲ ಎಂದು ಆರ್.ಬಿ. ತಿಮ್ಮಾಪುರ ಟೀಕಿಸಿದ್ದಾರೆ.