ಚಿಂಚೋಳಿ : ಕಾಳಗಿ ತಾಲ್ಲೂಕಿನ ರಟಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಲುವೆಗಳು ತುಂಬಿ ಗೊಜ್ಜು ಗಬ್ಬು ನಾರುತ್ತಿದ್ದು ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಜನರಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತಿದ್ದು ರಟಕಲ್ ಗೋಶಾಲೆಯಲ್ಲಿ ಗೋವುಗಳಿಗೆ ಕುಡಿಯುವ ನೀರಿನ ಹಾಹಾಕಾರವಿದ್ದು ಅವುಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಏಕೆಂದರೆ 7.4 ಗೋವುಗಳಿದ್ದು 23 ಕರುಗಳಿವೆ ಗೋಶಾಲೆಯಲ್ಲಿ, ಗೋವುಗಳು ನೀರಿಗಾಗಿ 4 ಕಿಲೋಮೀಟರ್ ದೂರದಲ್ಲಿರುವ ಕಾಂಚನಾಳ ಹಳ್ಳಕ್ಕೆ ಹೋಗಿ ಆ ಗೋವುಗಳಿಗೆ ನೀರು ಕುಡಿಸಬೇಕು ಇದರಿಂದ ಗೋವುಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ,ಕೂಡಲೇ ಪರಿಹರಿಸುವಂತೆ ರಟ್ಕಲ್ ಗ್ರಾಪಂ ಕಚೇರಿಯ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನಾಗರಿಕರು ಮಾನ್ಯ ಕಾರ್ಯನಿರ್ವಹಕ ಅಧಿಕಾರಿ ಕಾಳಗಿ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರಣಬಸಪ್ಪ ಮಮಶೆಟ್ಟಿ, ರೇವಣಸಿದ್ಧ, ಬಸವರಾಜ್, ಗುರು ನಂದೇಶ್, ವೀರೇಶ್, ಬಸವರಾಜ್, ವೈಜನಾಥ, ಜಗನ್ನಾಥ್ ,ಬಂಡಪ್ಪ, ಇನ್ನೂ ಹಲವಾರು ಜನ ಉಪಸ್ಥಿತರಿದ್ದರು .