ನ್ಯಾಯ ಸಮ್ಮತ ಕೆಲಸಕ್ಕೆ ಸೂಚನೆ

ನ್ಯಾಯ ಸಮ್ಮತ ಕೆಲಸಕ್ಕೆ ಸೂಚನೆ

ಕಲಬುರ್ಗಿ : ಸಿಡಿ ಪ್ರಕರಣದಲ್ಲಿ ಎಸ್‌ಐಟಿಗೆ ನ್ಯಾಯ ಸಮ್ಮತವಾಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಯಾರ ಪರ ಅಥವಾ ವಿರೋಧವಾಗಿಯೂ ಇಲ್ಲ. ನಾವು ಸತ್ಯದ ಪರವಾಗಿ ಎಂಬುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಡಿ ಪ್ರಕರಣ ಕುರಿತಂತೆ ಎಸ್‌ಐಟಿ ಇದುವರೆಗಿನ ತನಿಖೆಯ ವರದಿಯನ್ನು ಕೋರ್ಟ್ಗೆ ಸಲ್ಲಿಸಲಾಗುವುದು ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಎಸ್‌ಐಟಿಗೆ ಕ್ರಮಬದ್ಧ ಹಾಗೂ ನ್ಯಾಯ ಸಮ್ಮತವಾಗಿ ಸಿಡಿ ಪ್ರಕರಣದ ಕುರಿತಂತೆ ತನಿಖೆ ನಡೆಸಲು ಸೂಚಿಸಲಾಗಿದೆ.

ಎಸ್‌ಐಟಿ ತನಿಖೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಎಸ್‌ಐಟಿಯವರೇ ಅಲ್ಲಿನ ವಿದ್ಯಾಮಾನಗಳ ಕುರಿತಂತೆ ಹೇಳಲಿದ್ದಾರೆ.

Related