ಸಾಲ ಮನ್ನಾ ಮಾಡಲು ಒತ್ತಾಯ

ಸಾಲ ಮನ್ನಾ ಮಾಡಲು ಒತ್ತಾಯ

ಗಂಗಾವತಿ : ರಾಜ್ಯದಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗರಸಭೆ ಸದಸ್ಯರಾದ ಶಾಮೀದ್ ಮನಿಯಾರ್ ಮನವಿ ಮಾಡಿದರು.

ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡಿದ್ದು, ಇದರಿಂದ ದಿನಗೂಲಿ ಕಾರ್ಮಿಕರು, ರೈತರು, ಬಡವರು, ಮಹಿಳೆಯರಿಗೆ ಹಾಗೂ ಕೆಲಸವಿಲ್ಲದೇ ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಕಳೆದ 2 ತಿಂಗಳಿನಿAದ ಆಗುತ್ತಿದೆ. ಕಾರಣ ರಾಜ್ಯದಲ್ಲಿರುವ ಮಹಿಳಾ ಸ್ವ-ಸಹಾಯ ಗುಂಪುಗಳು, ಸಾಲ ಪಡೆದಿರುವ ಗುಂಪುಗಳಿಗೆ ಮೈಕ್ರೋ ಫೈನಾನ್ಸ್ ಏಜೆನ್ಸಿಗಳು ಈಗಾಗಲೇ ಹಣ ವಸೂಲಿಗಾಗಿ ಜನರಿಗೆ ತೊಂದರೆ ಕೊಡುತ್ತಿದಾರೆ.

ಮಹಿಳಾ ಸಂಘಗಳ ಕನಿಷ್ಠ 50,000 ಒಳಗೆ ಸಾಲ ಪಡೆದಿರುವ ಫಲಾನುಭವಿಗಳ ಸಾಲವನ್ನು ಸರ್ಕಾರದಿಂದ ಭರಿಸಿ ಸಾಲ ಮನ್ನಾ ಮಾಡಬೇಕು. ಬಡವರ ಮುಂದಿನ ಜೀವನ ಸುಗಮವಾಗಿ ನಡೆಸಲು ಅನುಕೂಲ ಕಲ್ಪಿಸಿದಂತಾಗುವುದೆAದು  ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Related