ಟೀಚರ್ ಅಲ್ಲ, ಇವಳು ಕಿಚಕಿ

  • In State
  • February 10, 2020
  • 927 Views
ಟೀಚರ್ ಅಲ್ಲ, ಇವಳು ಕಿಚಕಿ

ಕೊಪ್ಪಳ, ಫೆ. 10: ಬಡವರು ತಮ್ಮ ಚಿಕ್ಕ ಮಕ್ಕಳನ್ನು ಅಂಗನವಾಡಿಗೆ ಕಳಿಸುವುದು ಯಾಕೆಂದರೆ ಅವರಿಗೆ ಶ್ರೀಮಂತರಂತೆ ಹಣ ಕಟ್ಟಿ ಎಲ್ಕೆಜಿ-ಯುಕೆಜಿಗೆ ಕಳುಹಿಸಲು ಸಾಧ್ಯವಾಗದ ಕಾರಣಕ್ಕೆ ಅಂಗನವಾಡಿಗೆ ಕಳಿಸುತ್ತಾರೆ. ಆದರೆ, ಅಕ್ಷರ ಕಲಿಸಿಕೊಡುವ ಶಿಕ್ಷಕಿಯೊಬ್ಬರು ಚಿಕ್ಕ ಕಂದಮ್ಮ ನ  ಕೆನ್ನೆಗೆ ಬಾರಿಸಿರುವ ಘಟನೆಯೊಂದು ನಡೆದಿದೆ.

ಹೌದು, ಅ ಆ ಬರೆಯಿಸಿಕೊಳ್ಳೋ ವಿಚಾರಕ್ಕಾಗಿ ಹಿಗ್ಗಾಮುಗ್ಗ ತಳಿಸಿ ಕಪಾಳ ಮೋಕ್ಷ ಮಾಡಿ ಚಿಕ್ಕ ಕಂದಮ್ಮ ನಿಗೆ ಬಾಯಿಗೆ ಬಡಿದು, ಕಟ್ಟಿಗೆಯಿಂದ ಥಳಿಸಿದ್ದಾರೆ. ಟೀಚರ್ ಸಂಗಮ್ಮ ಎಂಬ ಅಂಗನವಾಡಿ ಕಾರ್ಯಕರ್ತೆಯಿಂದ  ಅಮಾನವೀಯ ಕೃತ್ಯ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ನಡೆದಿದೆ.

ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಗುವನ್ನ ಥಳಿಸುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆ ಹೀಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related