ನಡುರಸ್ತೆಯಲ್ಲಿ : ಕಣ್ಣೀರಿಟ್ಟ ಸದಸ್ಯೆ

ನಡುರಸ್ತೆಯಲ್ಲಿ : ಕಣ್ಣೀರಿಟ್ಟ ಸದಸ್ಯೆ

ಮಳವಳ್ಳಿ : ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಅಡ್ಡ ಮತದಾನಕ್ಕೆ ಕಾಂಗ್ರೆಸ್ ಮುಖಂಡ ಪಿ.ಎಂ. ನರೇಂದ್ರಸ್ವಾಮಿ ಅವರು ಸೂಚಿಸಿದ್ದಾರೆ. ಎಂದು ಆರೋಪಿಸಿ ಜಿ.ಪಂ ಸದಸ್ಯೆ ಸುಜಾತಾ ಸುಂದ್ರಪ್ಪ ನಡುರಸ್ತೆಯಲ್ಲಿ ಕುಳಿತು ಕಣ್ಣೀರಿಟ್ಟರು.

ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸುಜಾತಾ ಅವರ ಪತಿ ಸುಂದ್ರಪ್ಪ ಅವರು ಎ ತರಗತಿಯಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಮಂಗಳವಾರ ರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರ ಬದಲಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಎ ತರಗತಿಯ ಮತದಾರರಿಗೆ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ನರೇಂದ್ರಸ್ವಾಮಿ ನಡೆ ಖಂಡಿಸಿ ರಸ್ತೆ ಮಧ್ಯೆ ಕುಳಿತು ಸುಜಾತಾ ಆಕ್ರೋಶ ವ್ಯಕ್ತಪಡಿಸಿದರು.

Related