ಕಾಂಗ್ರೆಸ್ ಅಧಿಕಾರದಲ್ಲಿದ್ರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು – ತೇಜಸ್ವಿ

ಕಾಂಗ್ರೆಸ್ ಅಧಿಕಾರದಲ್ಲಿದ್ರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು – ತೇಜಸ್ವಿ

ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದು, ಈಗ ನಮ್ಮವರೆ ಇದ್ದಾಗ ಏನೂ ಮಾಡೋಕ್ಕಾಗಲ್ಲ. ನಾವು ಸಿಎಂ ಬಳಿ ಹೋಗಿ ಹೇಳಬೇಕು ಅಷ್ಟೇ ಎಂದು ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.

ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ನಂತರ ಬಿಜೆಪಿ ಸರ್ಕಾರದ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಹಲವು ಜಿಲ್ಲೆಗಳ ಯುವ ಮೋರ್ಚಾದ ಅಧ್ಯಕ್ಷರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಸಮಾಧಾನ ಪಡಿಸಲು ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗುಂಡಿಯವರೊಂದಿಗೆ ಫೋನ್ ನಲ್ಲಿ ಮಾತನಾಡುವಾಗ ತೇಜಸ್ವ ಸೂರ್ಯ ಹೇಳಿರುವುದು ದಾಖಲಾಗಿದೆ.

ಅಲ್ಲದೆ ಇಂದು ಸಂಜೆ 5.30ಕ್ಕೆ ಎಲ್ಲಾ ಜಿಲ್ಲೆಗಳ ಯುವ ಮೋರ್ಚಾ ಅಧ್ಯಕ್ಷರ ಜೊತೆ ಸಭೆ ನಡೆಯಲಿದ್ದು, ಅದಕ್ಕೂ ಮುನ್ನವೆ ರಾಜೀನಾಮೆ ಹಿಂಪಡೆಯಿರಿ. ನಾನೇ ನಾಲ್ಕು ಸಾಲು ಬರೆದುಕಳಿಸುತ್ತೇವೆ. ಅದಕ್ಕೆ ಸಹಿ ಮಾಡಿಕೊಟ್ಟರೆ ಸಾಕು, ನೀವು ರಾಜೀನಾಮೆ ವಾಪಸ್ ಪಡೆದ ಪತ್ರ ಪಡೆದ ನಂತರವಷ್ಟೇ ನಾನು ಮೀಟಿಂಗ್ ಶುರುಮಾಡುತ್ತೇನೆ ಎಂದು ಎಂದು ಪರಿ ಪರಿಯಾಗಿ ಮನವಿ ಮಾಡುವುದು ಕಂಡುಬಂದಿದೆ.

Related