ಉಪಪ್ರಧಾನಿಗೆ ಅಗೌರವ ತೋರಿದ ಆಸ್ಪತ್ರೆ ಸಿಬ್ಬಂದಿ

ಉಪಪ್ರಧಾನಿಗೆ  ಅಗೌರವ ತೋರಿದ ಆಸ್ಪತ್ರೆ ಸಿಬ್ಬಂದಿ

ಕೆಂಭಾವಿ : ನಾಡಿನಾಧ್ಯಂತ ಡಾ. ಬಾಬು ಜಗಜೀವನ್ ರಾಮ್‌ರ 144ನೇ ದಿನಾಚರಣೆಯನ್ನು ಆಚರಿಸುತ್ತಿದ್ದರೆ, ಕೆಂಭವಿ ಪಟ್ಟಣದ ಸಮುದಾಯ ಆಸ್ಪತ್ರೆಯಲ್ಲಿ ಆಚರಣೆ ಮಾಡದೇ ಸಿಬ್ಬಂದಿಗಳು ನಿರ್ಲಕ್ಷ್ಯತನವಹಿಸಿರುವುದನ್ನು ಬಾಬುರಾಮ್‌ರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದರು.

ಕೂಡಲೇ ಆಸ್ಪತ್ರೆಗೆ ತೆರಳಿ ಆಸ್ಪತ್ರೆ ಸಿಬ್ಬಂದಿಯೊAದಿಗೆ ವಾಗ್ವಾದಕ್ಕಿಳಿದರು. ಕೂಡಲೇ ಪರಿಸ್ಥಿತಿಯನ್ನರಿತ ವೈದ್ಯಾಧಿಕಾರಿ ಸ್ಥಳಕೆ ಧಾವಿಸಿ ಅಭಿಮಾನಿಗಳ ಮನವೊಲಿಸಿ ಪರಿಸ್ಥಿತಿ ಶಾಂತ ಗೊಳಿಸಿ ನಂತರ ಅಭಿಮಾನಿಗಳ ಸಮ್ಮುಖದಲ್ಲಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಅವರ ದಿನಾಚರಣೆ ಆಚರಿಸಲಾಯಿತು.

ಆರೋಪ, ಶೋಷಿತರ ಹಕ್ಕಿಗಾಗಿ ಹೋರಾಟ ಮಾಡಿದ ಡಾ. ಬಾಬು ಜಗಜೀವನ ರಾಮ್ ಅವರ ಸೇವೆ ಸದಾ ಸ್ಪೂರ್ತಿದಾಯಕ ಎಂದು ಈಗಿನ ಪ್ರಧಾನಿ ನರೇಂದ್ರ ಮೋದಿ ಅಂತಹ ಗಣ್ಯ ನಾಯಕರೆ ಮಾಜಿ ಪ್ರಧಾನಿ ಬಗ್ಗೆ ವರ್ಣನೆ ಮಾಡುತ್ತಿರುವಾಗ ಪಟ್ಟಣದ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ವೈದ್ಯರು ಹಸಿರು ಕ್ರಾಂತಿಯ ಹರಿಕಾರ ಸಮಾಜ ಸೇವಕ ಬಡವರ ಹಸಿವು ನೀಗಿಸಿದ ಮಹಾನ್ ಪುರುಷ ಮಾಜಿ ಉಪಪ್ರಧಾನಿ ಬಾಬು ಜಗಜೀವನ ರಾಮ್ ಅಂತಹ ಮಹಾನ್‌ವ್ಯಕ್ತಿಯ ದಿನಾಚರಣೆ ಮಾಡದೆ, ಅಗೌರವ ತೋರಿರುವ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಮೇಲೆ ಜಿಲ್ಲಾಧಿಕಾರಿಯವರು ಶಿಸ್ತು ಕ್ರಮ ಜರುಗಿಸಬೇಕೆಂದರು. – ಮಲ್ಲು ವಠಾರ, ಮಾದಿಗ ಯುವ ಸಂಘದ

Related