ಈ ಬಾರಿ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಯಾಗಲಿದೆ: ಸೌಮ್ಯ ರೆಡ್ಡಿ

ಈ ಬಾರಿ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಯಾಗಲಿದೆ: ಸೌಮ್ಯ ರೆಡ್ಡಿ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಎಲ್ಲಾ ಪಕ್ಷದ ಅಭ್ಯರ್ಥಿಗಳು ಬರದಿಂದ ಮತ ಪ್ರಚಾರ ಮಾಡುತ್ತಿದ್ದು ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೌಮ್ಯ ರೆಡ್ಡಿ ಅವರು ಬುಧವಾರ ರಾತ್ರಿ ಮಂಗಮ್ಮನ ಪಾಳ್ಯ ಸುತ್ತಮುತ್ತಲಿನಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಸೌಮ್ಯ ರೆಡ್ಡಿ ಅವರು, ನೀವು ಎಲ್ಲೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಇತಿಹಾಸದಲ್ಲಿ ಒಂದ್ಸಲಿನೂ ನಮ್ಮ ಬೆಂಗಳೂರು ಮಹಿಳೆ ಸಂಸದಕ್ಕೆ ಹೋಗಿಲ್ಲ, ಅದರೆ ಈಗ ಇತಿಹಾಸ ಸೃಷ್ಟಿಯಾಗುತ್ತದೆ. ನಾನು ಗೆದ್ದರೆ ನೀವು ಗೆದ್ದಂಗೆ, ನಾನು ಗೆದ್ದು ಪ್ರತಿಯೊಬ್ಬ ಯುವಕರು ಗೆದ್ದಂಗೆ ಎಂದು ಹೇಳಿದರು.

ಎಲ್ಲಾ ಕಡೆನೂ ಸಾಕಪ್ಪ ಈ ಬಿಜೆಪಿ ಸರ್ಕಾರ ಎಂದು ಹೇಳುತ್ತಿದ್ದಾರೆ ಹಾಗಾಗಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ ನೀವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು.

ಜನರು ಈ ಬಾರಿ ಬದಲಾವಣೆ ಕೇಳುತ್ತಿದ್ದಾರೆ ಹಾಗಾಗಿ ನಿಮ್ಮ ನೆಚ್ಚಿನ ನಾಯಕರನ್ನು ಆಯ್ಕೆ ಮಾಡುವುದು ನಿಮ್ಮ ಜವಾಬ್ದಾರಿ ಹಾಗಾಗಿ ಅತ್ಯುತ್ತಮ ನಾಯಕರನ್ನು ಆಯ್ಕೆ ಮಾಡಿ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಸುದೇವರೆಡ್ಡಿ, ಮಾಜಿ ಕೌನ್ಸಿಲರ್ ಕೆ.ರಮೇಶ್, ಚಿಕ್ಕಣ್ಣ, ಎ.ವಿ.ಎಸ್.ಗೌಡ, ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.

Related