ಬ್ಲಾಕ್ ಫಂಗಸ್ ಪೀಡಿತನಿಗೆ ಸಹಾಯ ಧನ : ಡಿಸಿಎಂ ಸವದಿ

ಬ್ಲಾಕ್ ಫಂಗಸ್ ಪೀಡಿತನಿಗೆ ಸಹಾಯ ಧನ : ಡಿಸಿಎಂ ಸವದಿ

ಅಥಣಿ : ರಾಜ್ಯಾದ್ಯಂತ ಕೋವಿಡ್ ಎರಡನೆಯ ಅಲೆಯ ನಡುವೆಯೆ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಬಾಧಿಸುತ್ತಿರುವ ಕಪ್ಪು ಶಿಲಿಂಧ್ರ (ಬ್ಲಾಕ್ ಫಂಗಸ್ ಇನ್‌ಫೆಕ್ಷನ್) ರೋಗ ಹಲವರಲ್ಲಿ ಕಂಡು ಬರುತ್ತಿದೆ.

ಆರಂಭದಲ್ಲಿ ಗಲ್ಲ, ಮೂಗು, ಕಣ್ಣಿನ ರೆಪ್ಪೆಯ ಮೇಲ್ಭಾಗದಲ್ಲಿ ಬಾವು ಕಾಣಿಸಿಕೊಂಡು ನಂತರದಲ್ಲಿ ದೇಹದ ಒಳಭಾಗಕ್ಕೆ ಹರಡಿ ಜೀವಕ್ಕೆ ಎರವಾಗುತ್ತಿರುವ ಈ ಕಾಯಿಲೆ ಕೋವಿಡ್ ಚಿಕಿತ್ಸೆ ಪಡೆದವರಲ್ಲಿ ಕಂಡುಬರುತ್ತಿರುವುದು ತೀವ್ರ ತಲೆನೋವಾಗಿ ಪರಿಣಮಿಸಿದೆ. ಚಿಕಿತ್ಸೆಗೆ ಬಳಕೆ ಆಗುವ ಔಷಧಿಗಳ ಅಡ್ಡಪರಿಣಾಮ ಎಂದು ಹೇಳುತ್ತಿದ್ದರೂ ಕೂಡ ಕೋವಿಡ್‌ಗಿಂತ ಮುಂದುವರೆದ ಕಾಯಿಲೆಯಾಗಿ ಬ್ಲಾಕ್ ಫಂಗಸ್ ಅಡ್ಡಪರಿಣಾಮ ಬೀರುತ್ತಾ ಸದ್ಯ ಜೀವಹಾನಿ ಮಾಡುತ್ತಿದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ, ಬಿಪಿ, ಶುಗರ್ ಮತ್ತು ಇತರೆ ದೈನಂದಿನ ಕಾಯಲೆಗಳಿಂದ ಬಳಲುತ್ತಿರುವ ಜನರಲ್ಲಿ ಕಂಡು ಬರುತ್ತಿರುವ ಕಪ್ಪು ಶಿಲೀಂದ್ರ ಕಾಯಿಲೆ ಅಥಣಿಗೂ ಹಬ್ಬಿದ್ದು ತಾಲೂಕು ಪಂಚಾಯತಿಯ ನರೇಗಾ ಯೋಜನೆಯಲ್ಲಿ ಅಭಿಯಂತರರಾಗಿ ಕರ್ತವ್ಯ ನೀರ್ವಹಿಸುತ್ತಿದ್ದ ಆನಂದ ಕುಳಲಿ ಸದ್ಯ ಈ ಕಾಯಿಲೆಗೆ ತುತ್ತಾಗಿದ್ದಾರೆ.

ಇನ್ನೂ ವಿಷಯ ತಿಳಿಯುತ್ತಿದ್ದಂತೆಯೆ ಮಾನವೀಯತೆ ಮೆರೆದ ಡಿಸಿಎಮ್ ಲಕ್ಷ್ಮಣ ಸವದಿ ಸದ್ಯ ಮೀರಜ್ ಪಟ್ಟಣದ ಡಾಕ್ಟರ್ ಮೋಹನ್ ಭಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಕುಳಲಿ ಅವರ ಚಿಕಿತ್ಸೆಗೆ ಸಹಾಯಧನ ನೀಡಲು ಮುಂದಾಗಿದ್ದು ಅಗತ್ಯ ಬಿದ್ದರೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದ್ದಾರೆ.

ಈ ಮೂಲಕ ಸಾರ್ಜನಿಕವಾಗಿ ಮತ್ತು ವೈಯುಕ್ತಿಕವಾಗಿ ತನು, ಮನ, ಧನದಿಂದ ಡಿಸಿಎಮ್ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರದ ಜನರ ಜೀವರಕ್ಷಣೆಗೆ ಮುಂದಾಗುತ್ತಿದ್ದು ಕೋವಿಡ್ ಎರಡನೆಯ ಅಲೆ ನಿರಂತರವಾಗಿ ಸಾವು ನೋವು ಹೆಚ್ಚಿಸುತ್ತಿರುವುದರ ನಡುವೆಯೆ ಹೊಸದಾಗಿ ಕಂಡುಬರುತ್ತಿರುವ ಕಪ್ಪು ಶಿಲಿಂಧ್ರ ಕಾಯಿಲೆ ಪೀಡಿತರ ಚಿಕಿತ್ಸೆಗೂ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದ ಸಾರಿಗೆ ಸಚಿವ ಸವದಿ ಅವರ ಬಗ್ಗೆ ಜನಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಸಾಹುಕಾರ್ ಸವದಿ ಹೃದಯ ಶ್ರೀಮಂತಿಕೆಯಿಂದಲೂ ಜನಮಾನಸದಲ್ಲಿ

Related