ನಮ್ಮ ಬಾಕಿ ವೇತನ ಕೊಡಿ

ನಮ್ಮ ಬಾಕಿ ವೇತನ ಕೊಡಿ

ಯರಗಟ್ಟಿ: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಹಾಗೂ ಶಿಕ್ಷಕರ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಯರಗಟ್ಟಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರು ಜಂಟಿಯಾಗಿ ಧರಣಿ ನಡೆಸಿದರು.

ಕೊರೋನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರ ಹಾಗೂ ಅತಿಥಿ ಶಿಕ್ಷಕರ ಜೀವನ ದುಸ್ತರವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಹಾಗೂ ಶಿಕ್ಷಕರÀ ಭದ್ರತೆಯ ದೃಷ್ಠಿಯಿಂದ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕೂಡಲೇ ಎಲ್ಲಾ ಸೇವಾ ಭದ್ರತೆ ಒದಗಿಸಿ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಎಐಡಿವೈಓ ಸಂಘಟನೆ ಕಾರ್ಯದರ್ಶಿ ರಾಜು ಗಾಣಗಿ, ಅತಿಥಿ ಶಿಕ್ಷಕರಾದ ಭೀರಪ್ಪ ಅದ್ದುಗೊಳ, ಶ್ರೀಧರ ಪಟ್ಟಣಶೆಟ್ಟಿ, ಸತೀಶ ಹುಲಕುಂದ, ಪರಶುರಾಮ ಮಾಲದಿನ್ನಿ, ಯಲ್ಲಪ್ಪ ಬೆಳ್ಳಿವೇರಿ, ಬಸವರಾಜ ಇಟಗೌಡರ, ಪಾಂಡುರಂಗ ಸತ್ತಿಗೇರಿ ಮುಂತಾದವರು ಉಪಸ್ಥಿತರಿದ್ದರು.

Related