ಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಅನುದಾನ

ಸೇವಾಲಾಲ್ ದೇವಸ್ಥಾನ ನಿರ್ಮಾಣಕ್ಕೆ ಅನುದಾನ

ಯಲಬುರ್ಗಾ : ತಾಲೂಕಿನ ದಮ್ಮೂರು ತಾಂಡಾದಲ್ಲಿ ಸೇವಾಲಾಲ್ ದೇವಸ್ಥಾನ ನಿಮಾಣಕ್ಕೆ ಅನುದಾನ ನೀಡುವಂತೆ ತಾಂಡಾದ ಹಿರಿಯರು, ಯುವಕರು ಶಾಸಕ ಹಾಲಪ್ಪ ಆಚಾರ ಅವರಿಗೆ ಮನವಿ ಸಲ್ಲಿಸಿದರು.

ತಾಂಡಾದ ಯುವ ಮುಖಂಡ ಶರಣು ರಾಠೋಡ ಮಾತನಾಡಿ, ತಾಂಡಾದಲ್ಲಿ ಸದ್ಯ ಇರುವ ದೇವಸ್ಥಾನ ಹಳೆಯದಾಗಿದ್ದು ಮೇಲ್ಚಾವಣಿ ಕುಸಿಯುತ್ತಿದೆ. ಮಳೆ ಬಂದರೇ ಸೊರುತ್ತದೆ. ನೂತನ ಹೊಸ ದೇವಸ್ಥಾನ ನಿರ್ಮಾಣಕ್ಕೆ ಶಾಸಕರು ತಮ್ಮ ಅನುದಾನದಲ್ಲಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.

ಮನವಿ ಪತ್ರ ಸ್ವೀಕರಿಸಿ ಶಾಸಕ ಹಾಲಪ್ಪ ಆಚಾರ್ ಮಾತನಾಡಿ ಶೀಘ್ರದಲ್ಲಿ ಅನುದಾನದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡುತ್ತೇನೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗೆ ಸೂಚಿಸಿ ದೇವಸ್ಥಾನ ನಿರ್ಮಾಣದ ಕ್ರಿಯಾಯೋಜನೆ ಮತ್ತು ಎಸ್ಟಿಮೇಟ್ ತಯಾರಿಸಲು ಸೂಚಿಸುತ್ತೇನೆ. ಒಟ್ಟಾರೆಯಾಗಿ ತಾಲೂಕಿನ ಲಂಬಾಣಿ ತಾಂಡಾಗಳ ಅಭಿವೃದ್ದಿಗೆ ಒತ್ತು ನೀಡುತ್ತೇನೆ ಎಂದರು.

Related