ಸರ್ಕಾರ ರೈತರಿಂದ ಗೋಮೂತ್ರ, ಸಗಣಿ ಖರೀದಿಸಲಿದೆ..!

  • In State
  • July 21, 2022
  • 221 Views
ಸರ್ಕಾರ ರೈತರಿಂದ ಗೋಮೂತ್ರ, ಸಗಣಿ ಖರೀದಿಸಲಿದೆ..!

ಬೆಂಗಳೂರು, ಜುಲೈ.21: ಛತ್ತೀಸ್ಗಢ ಸರ್ಕಾರದ ಮಾದರಿಯಂತೆ ಕರ್ನಾಟಕ ಸರ್ಕಾರದ ಪಶುಸಂಗೋಪನಾ ಇಲಾಖೆಯು ಹೆಚ್ಚುವರಿ ಆದಾಯವನ್ನು ಪಡೆಯಲು ರೈತರಿಂದ ಗೋಮೂತ್ರ ಮತ್ತು ಸಗಣಿಯನ್ನು ಖರೀದಿಸಲು ಚಿಂತನೆ ನಡೆಸಿದೆ.

ಆರಂಭದಲ್ಲಿ ಇಲಾಖೆಯು ಉದ್ದೇಶಿತ ಗೋಶಾಲೆಗಳಿಂದ ಗೋಮೂತ್ರ ಮತ್ತು ಸಗಣಿ ಪಡೆಯುತ್ತದೆ. ಗೋಮೂತ್ರ ಮತ್ತು ಸಗಣಿ ಬಳಸಿ ವಿವಿಧ ಉತ್ಪನ್ನಗಳನ್ನು ತಯಾರಿಸಲು ಅದು ಯೋಜಿಸಿದೆ. ಅಲ್ಲದೇ ಈ ಮೂಲಕ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.

ಪ್ರಸ್ತುತ ಕೆಲವು ಖಾಸಗಿ ಗೋಶಾಲೆಗಳಿಗೆ ಅನುದಾನ ನೀಡುತ್ತಿರುವ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸುಮಾರು 100 ಗೋಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ. ಅವುಗಳಲ್ಲಿ ಕೆಲವು ಈಗಾಗಲೇ ಪ್ರಾರಂಭವಾಗಿವೆ.

ಸರ್ಕಾರ ಈಗ ರೈತರಿಗೆ ಲಾಭದಾಯಕವಾಗಿಸಲು ಮುಂದಾಗಿದೆ. ಛತ್ತೀಸ್ಗಢ ಸರ್ಕಾರ ರೈತರಿಂದ ಗೋಮೂತ್ರವನ್ನು ಲೀಟರ್ಗೆ 4 ರೂ.ಗೆ ಮತ್ತು ಹಸುವಿನ ಸಗಣಿಯನ್ನು ಕೆಜಿಗೆ 2 ರೂ. ದರದಲ್ಲಿ ಖರೀದಿ ಮಾಡುತ್ತಿದೆ.

ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಖರೀದಿ ನಡೆಯುತ್ತಿದೆ. ಈ ಬಗ್ಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಮಾತನಾಡಿ, “ಪ್ರಸ್ತುತ ಗೋಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ.

ರಾಷ್ಟ್ರೋತ್ಥಾನ ಪರಿಷತ್ತು ಸೇರಿದಂತೆ ಹಲವು ಖಾಸಗಿ ಮಠಗಳು ಮತ್ತು ಸಂಸ್ಥೆಗಳು ಗೋಮೂತ್ರ ಮತ್ತು ಗೋವಿನ ಸಗಣಿಗಳನ್ನು ಜೈವಿಕ ಅನಿಲ, ಡೈಯಾಸ್, ಶಾಂಪೂಗಳು, ಕೀಟನಾಶಕಗಳು, ಮುಲಾಮುಗಳು ಮತ್ತು ಇನ್ನೂ ಅನೇಕ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುತ್ತಿವೆ” ಎಂದರು.

Related