ವಿಜಯಪುರ : ಗಣೇಶ ಉತ್ಸವವನ್ನು ಈ ಬಾರಿಯೂ ಕಳೆದ ವರ್ಷದಂತೆ ಸರಳವಾಗಿ ಆಚರಿಸಲು ಅನುಮತಿ ನೀಡಬೇಕೆಂದು ಮಾಜಿ ಸಚಿವ ಅಪ್ಪ ಸಾಹೇಬ್ ಶುಕ್ರವಾರ ಪಟ್ಟಣ ಶೆಟ್ಟಿ ಮುಖ್ಯ ಮಂತ್ರಿಗೆ ಮನವಿ ಮಾಡಿದರು. ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಮರ್ಪಿಸಿದ್ದರು.
ಆನಂತರ ಪತ್ರಕರ್ತರೊಂದಿಗೆ ಮಾತನಾಡಿದರು ” ಹಿಂದೂಗಳ ಪವಿತ್ರ ಧರ್ಮವಾದ ಗಜಾನನ ಹಬ್ಬವನ್ನು ಹತ್ತಿ ಕಿಂತವಾಗುತ್ತದೆ ಇದನ್ನು ಗಜಾನನ ಉತ್ಸವ ಮಂಡಲವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸದರಿ ಹಬ್ಬವು ಕಾನೂನಿನ ಚೌಕಟ್ಟಿನಲ್ಲಿ ಸರಳ ಮತ್ತು ಕೂಗುದು ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಮೆರವಣಿಗೆ ಮತ್ತು ಯಾವುದೇ ಸಾಂಸ್ಕೃತಿಕ ಕರ್ಯಕ್ರಮವನ್ನು ಹಾಗೂ ಪ್ರಸಾದ ವಿತರಣೆ ಇಲ್ಲದೆ ಎಲ್ಲಾ ಮಂಡಳಿಗಳು ಸ್ಯಾನಿಟೈಸರ್ ಮಾಡೋದು ಸಾಮಾಜಿಕ ಅಂತರದೊಂದಿಗೆ ಕಡ್ಡಾಯವಾಗಿ ನಿಯಮ ಪಾಲನೆ ಮಾಡಿ ಆಚರಿಸುವುದಕ್ಕೆ ಅನುಮತಿ ನೀಡಬೇಕೆಂದು” ವಿನಂತಿಸಿಕೊಂಡರು. ಗೋಪಾಲ ಕಾಂಬಳೆ, ಸಚಿನ್ ಅಡಿಕೆ, ಮಾರುತಿ ಮೋರೆ , ಅಭಿಷೇಕ್ ಸಾವಂತ್ ಉಪಸ್ಥಿತರಿದ್ದರು.