ಗಣೇಶ ಹಬ್ಬಕ್ಕೆ   ಭರ್ಜರಿ ವ್ಯಾಪಾರ

ಗಣೇಶ ಹಬ್ಬಕ್ಕೆ   ಭರ್ಜರಿ ವ್ಯಾಪಾರ

ಬೆಂಗಳೂರು: ಬುಧವಾರ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ ಆರ್ ಮಾರ್ಕೆಟ್ ನಲ್ಲಿ ಸಾರ್ವಜನಿಕರು ಹೂವ, ಹಣ್ಣು ಮತ್ತು ಇತರ ಪೂಜೆಯ ಸಾಮಗ್ರಿಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡು ಬಂತು.

ಗೌರಿ-ಗಣೇಶ ಹಬ್ಬಕ್ಕೆ ವ್ಯಾಪಾರದ ಭರಾಟೆ ಆರಂಭವಾಗಿದ್ದು, ಗ್ರಾಹಕರಿಕೆ ಬೆಲೆ ಏರಿಕೆ ಬಿಸಿ ತಾಗಿದೆ. ಹೂವು-ಹಣ್ಣು ಬೆಲೆ ಗಗನಕ್ಕೇರಿದೆ. ಕಳೆದ  ಎರಡು ವರ್ಷಗಳ ಇಂದೆ ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳಿಗೆ ಸರ್ಕಾರ ಬ್ರೇಕ್ ಹಾಕಿತ್ತು, ಇದೀಗ ಗೌರಿ ಗಣೇಶ ಹಬ್ಬ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಜನರು ಭರ್ಜರಿಯಾಗಿ ತಯಾರಿ ಆರಂಭಿಸಿದ್ದಾರೆ.

ಕೆ.ಆರ್‌. ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ  ಭರ್ಜರಿಯಾಗಿ ನಡೆಯುತ್ತಿದ್ದು, ನಗರದ ಬಹುತೇಕ ರಸ್ತೆ, ಜನಸಂದಣಿ ಸ್ಥಳಗಳಲ್ಲಿ ಹೂವು, ಹಣ್ಣಿನ ಅಂಗಡಿಗಳು ತಲೆಯೆತ್ತಿದೆ.

Related