ಕೆಲಸ ಕೊಡಿಸುವುದಾಗಿ ವಂಚನೆ?

ಕೆಲಸ ಕೊಡಿಸುವುದಾಗಿ ವಂಚನೆ?

ಅಥಣಿ : ಅಥಣಿ ಶಾಸಕ ಹಾಗೂ ಕೊಳಗೇರಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರ ಆಪ್ತನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ತಾಲೂಕಿನ ಜನರಿಗೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮುರೆಪ್ಪಾ ಐನಾಪುರೆ ಎಂಬ ವ್ಯಕ್ತಿ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರ ಪ್ರತಿ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು ಶಾಸಕರ ಆಪ್ತನೆಂದು ಹೇಳಿಕೊಂಡು ತಿರುಗಿದ್ದಲ್ಲದೆ, ಹಲವಾರು ಮಹಿಳೆಯರು ಮತ್ತು ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಮತ್ತು ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವದಾಗಿ ಹೇಳಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಕಾರ್ಮಿಕರನ್ನಾಗಿ ನೇಮಕ ಮಾಡಿಸುವುದಾಗಿ ಹೇಳಿ ಮತ್ತು ಖಾಯಂಗೊಳಿಸುವ ಆಮಿಷವೊಡ್ಡಿದ್ದು ಸತ್ತಿ ಮತ್ತು ಶೇಗುಣಸಿ ಗ್ರಾಮದ ಇಬ್ಬರಿಂದ ಒಂದು ಲಕ್ಷ ಇಪ್ಪತ್ತು ಸಾವಿರದಷ್ಟು ಹಣ ಪಡೆದು ಕೆಲಸ ಕೊಡಿಸದೆ ತಲೆಮರೆಸಿಕೊಂಡು ತಿರುಗುತ್ತಿದ್ದ ಹಿನ್ನೆಲೆ ಅಥಣಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related