ಪೌರಕಾರ್ಮಿಕನಿಂದ ಧ್ವಜಾರೋಹಣ

ಪೌರಕಾರ್ಮಿಕನಿಂದ ಧ್ವಜಾರೋಹಣ

ಕಾಗವಾಡ : ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ 74ನೇ ಸ್ವಾತಂತ್ರ್ಯೂತ್ಸವ ಕಾರ್ಯಕ್ರಮವನ್ನು ಕೋವಿಡ್-19ರಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ನೀಡಿದ ಕೊರೋನಾ ವಾರಿಯರ್ಸ್ ಅವರಿಂದ ಸಂಪೂರ್ಣ ಧ್ವಜಾರೋಹಣದ ಕಾರ್ಯಕ್ರಮ ಆಯೋಜನೆ ಮಾಡಿ ಪ್ರಧಾನಿ ನರೇಂದ್ರ ಮೋದಿಜಿ ನೀಡಿರುವ ಸಂದೇಶದಂತೆ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎಂದು ಸ್ಪಷ್ಠಪಡಿಸಿದ ಶ್ರೀ ಪದ್ಮಾವತಿ ಶಿಕ್ಷಣ ಸಂಸ್ಥೆಯ ಧ್ವಜಾರೋಹಣದ ಸಮಾರಂಭ ಸಾಕ್ಷಿಯಾಗಿದೆ.

ಸಂಸ್ಥೆಯ ಅಧ್ಯಕ್ಷರು ಮತ್ತು ಅಥಣಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡಾ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಗ್ರಾಮದ ಅಜಿಂ ಢಾಲಾಯತ ಪೌರಕಾರ್ಮಿಕನ ಹಸ್ತದಿಂದ ಧ್ವಜಾರೋಹಣ ನೆರವೇರಿಸಿದರು. ಗ್ರಾಮದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ರಾಷ್ಟçಪಿತಾ ಮಹಾತ್ಮಾ ಗಾಂಧಿಜಿ, ಡಾ. ಬಾಬಾಸಾಹೇಬ ಅಂಬೇಡ್ಕರ ಇವರ ಪ್ರತಿಮೆಗಳಿಗೆ ಪೂಜೆ ನೆರವೇರಿಸಿದರು.

Related