ಸಾರ್ವಭೌಮತ್ವಕ್ಕೆ ಸವಾಲೆಸೆದ ರಾಷ್ಟ್ರಗಳಿಗೆ ಸಂದೇಶ

ಸಾರ್ವಭೌಮತ್ವಕ್ಕೆ ಸವಾಲೆಸೆದ ರಾಷ್ಟ್ರಗಳಿಗೆ ಸಂದೇಶ

ಹರಿಯಾಣ: ರಫೆಲ್ ಯುದ್ಧ ವಿಮಾನಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗುತ್ತಿರುವ ಈ ದಿನ ರಕ್ಷಣಾವಲಯಕ್ಕೆ ಮಹತ್ವದ್ದು ಎಂದು ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ಹರ್ಷವ್ಯಕ್ತಪಡಿಸಿದರು.

ಫ್ರಾನ್ಸ್ ನಿರ್ಮಿತ ರಫೆಲ್ ಯುದ್ಧ ವಿಮಾನಗಳು ಕಳೆದ ತಿಂಗಳು ಭಾರತಕ್ಕೆ ಬಂದಿದ್ದವು. ಈ ಯುದ್ಧ ವಿಮಾನಗಳನ್ನು ಇಂದು ಅಧಿಕೃತವಾಗಿ ವಾಯುಪಡೆಗೆ ಸೇರಿಸಿಕೊಳ್ಳುವ ಕಾರ್ಯಕ್ರಮ ಹರಿಯಾಣದ ಅಬಾಲಾದಲ್ಲಿ ಕೇಂದ್ರ ರಕ್ಷಣ ಸಚಿವ ರಾಜನಾಥ್ ಸಿಂಗ್ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ವಾಯುಪಡೆಗೆ ರಫೇಲ್ ಪ್ರವೇಶವು ವಿಶ್ವಕ್ಕೆ ಬಹುದೊಡ್ಡ ಸಂದೇಶ ಸಾರುತ್ತಿದೆ. ಮುಖ್ಯವಾಗಿ ಭಾರತದ ಸಾರ್ವಭೌಮತ್ವಕ್ಕೆ ಸವಾಲೆಸೆದಿದ್ದ ರಾಷ್ಟ್ರಗಳಿಗೆ ಸಂದೇಶ ರವಾನಿಸಿದೆ. ಜೊತೆಗೆ ರಾಷ್ಟ್ರದ ಭದ್ರತೆಯ ಮೇಲೂ ರಫೇಲ್ ವಿಮಾನದ ಸೇರ್ಪಡೆ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ಯಾವುದೇ ಯುದ್ಧದಲ್ಲಿ ಮಿಲಿಟರಿ ತಡೆ ಮತ್ತು ಕಾರ್ಯಗಳಲ್ಲಿ ರಫೇಲ್ ವಿಮಾನಗಳು ನಿರ್ಣಾಯಕವಾಗುತ್ತವೆ ಎಂದು ಹೇಳಿದರು.

Related