ಸಂತೆ ಮೈದಾನದ ಮರಗಳಿಗೆ ಬೆಂಕಿ

ಸಂತೆ ಮೈದಾನದ ಮರಗಳಿಗೆ ಬೆಂಕಿ

ಕೊರಟಗೆರೆ : ಸಂತೆ ಮೈದಾನದ ಖಾಲಿಜಾಗದಲ್ಲಿರುವ ಹಳೆಯ ಮರಗಳಿಗೆಕಿಡಿಗೇಡಿಗಳು ಬೆಂಕಿ ಹಾಕಿ ಸುಡುತ್ತಿದ್ದರೂ,ಗ್ರಾಪಂ ಗಮನಹರಿಸದೇ ಮೌನ ವಹಿಸಿದೆಎಂದು ಸಾರ್ವಜನಿಕರು ದೂರಿದ್ದಾರೆ.

ತೋವಿನಕೆರೆಗೆ ಹೊಂದಿಕೊಂಡಿರುವ ಜನಾರ್ದನ ತೋಪಿನಹಳ್ಳಿಯಲ್ಲಿಶತಮಾನಗಳಿಂದ ಪ್ರತಿ ಶುಕ್ರವಾರ ಸಂತೆನಡೆಯುತ್ತದೆ. ತೀವ್ರ ಬರಗಾಲದ ಸಮಯದಲ್ಲಿಹಲವು ತಿಂಗಳು ಗೋ ಶಾಲೆಯು ನಡೆದಿತ್ತು. ಸಂತೆ ಮೈದಾನದಲ್ಲಿ ಪೂರ್ವಿಕರು ನೆರಳಿಗಾಗಿ ಹಲವು ರೀತಿಯ ಮರಗಳನ್ನು ಹಾಕಿದ್ದು, ನೂರಕ್ಕೂ ಹೆಚ್ಚು ವರ್ಷಗಳಿಂದ ಇವೆ.

ಚೆನ್ನಾಗಿರುವ ಮರಗಳನ್ನು ಸೌದೆಗಾಗಿ ಕಡಿದುನಾಶ ಮಾಡುತ್ತಿದ್ದರೆ, ಕೆಲವರು ಬೆಂಕಿ ಹಾಕಿಸುಡುತ್ತಿದ್ದಾರೆ. 2015ರಲ್ಲಿ ಈ ಜಾಗದಲ್ಲಿದ್ದ ಗೋಶಾಲೆ ರಾಜ್ಯದ ಗಮನ ಸೆಳೆದಿತ್ತು.ಮೈದಾನದ ಮರಗಳ ನೆರಳು ಗೋಶಾಲೆನಡೆಸಲು ಉತ್ತಮವಾಗಿದೆ ಎಂದು ಪ್ರಶಂಸೆವ್ಯಕ್ತಪಡಿಸಿ ಹಿರಿಯ ಅಧಿಕಾರಿಗಳು ಎರಡು ಸಲಗೋಶಾಲೆ ನಡೆಸಿದ್ದರು.
ಪ್ರತಿವರ್ಷ ಸಂತೆಹರಾಜು ಹಾಕಿ ಲಕ್ಷಾಂತರ ಹಣ ಗಳಿಸುವ ಪಂಚಾಯಿತಿಯವರು ಇಲ್ಲಿನ ಮರಗಳ ಸಂರಕ್ಷಣೆಗೆ ಯಾವ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Related