ನಸುಕಿನ ಜಾವ ಹೋಟೆಲ್‍ಗೆ ಬೆಂಕಿ

ನಸುಕಿನ ಜಾವ ಹೋಟೆಲ್‍ಗೆ ಬೆಂಕಿ

ಬೆಂಗಳೂರು : ಬಸವನಗುಡಿ ಬಳಿಯ ನೆಟ್ಟಕಲ್ಲಪ್ಲ ವೃತ್ತದಲ್ಲಿರುವ ಹೋಟೆಲ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ.

ಶ್ರೀ ಗುರು ಕೊಟ್ಟೊರೇಶ್ವರ ಹೋಟೆಲ್ ಹಾಗೂ ಅದರ ಪಕ್ಕದ ಆಪ್ಟಿಕಲ್ ಮಳಿಗೆಯಲ್ಲಿ ಸೋಮವಾರ ನಸುಕಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಎರಡೂ ಕಡೆಯಲ್ಲೂ ಬೆಂಕಿ ಹೊತ್ತಿ ಉರಿಯುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುತ್ತಿದ್ದಾರೆ.

‘ವಿದ್ಯುತ್ ಶಾರ್ಟ್ ಸರ್ಕಿಟ್ ಅಥವಾ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದರು.

Related