ಹನುಮನ ಸ್ಮರಣೆಯಲ್ಲಿ ರೈತನ ಮರೆತ ಶಾಸಕರು

ಹನುಮನ ಸ್ಮರಣೆಯಲ್ಲಿ ರೈತನ ಮರೆತ ಶಾಸಕರು

ಯಡ್ರಾಮಿ : ರೈತ ಈ ದೇಶದ ಬೆನ್ನೆಲುಬ ನಾನು ರೈತರ ಪರವಾಗಿ ಎಂದು ವೇದಿಕೆ ಮೇಲೆ ಭಾಷಣ ಮಾಡುವ ಜೇವರ್ಗಿ ಮತಕ್ಷೆತ್ರದ ಶಾಸಕ ಡಾ.ಅಜಯಸಿಂಗ ಅವರು ವಡಗೇರಾ ಗ್ರಾಮದ ನೂತನ ಹನುಮಾನ ಮಂದಿರ ಉದ್ಘಾಟನೆ ಮಾಡಿ ವೇದಿಕೆ ಮೇಲೆ ನಾನು ಹನುಮಂತ ಆರಾಧಕ ಪ್ರತಿ ಮಂಗಳವಾರ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಮಾತನಾಡಿದರು .

ಆದರೆ ಸುಮಾರು ನಾಲ್ಕು ದಿನದ ಹಿಂದೆ ಇದೆ ವಡಗೇರಾ ಗ್ರಾಮದಲ್ಲಿ ಸಾಲಭಾದೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡ ಅವರ ಮನೆಗೆ ಹೋಗಬೇಕು ನೋವಲ್ಲಿ ಇರುವ ರೈತ ಕುಟುಂಬಕ್ಕೆ ಸಾಂತ್ವನ ಹೇಳಬೇಕು ಎಂಬುದು ಶಾಸಕರ ಗಮನಕ್ಕೆ ಬರಲಿಲ್ಲ ಎಂದು ವಡಗೇರಾ ಗ್ರಾಮದ ಜನರ ಆಕ್ರೋಶವಾಗಿದೆ.

ಗ್ರಾಮ ವಾಸ್ಥವ್ಯ ಮಾಡಿದರು ಹಲವಾರು ಮನವಿ ಕೊಡಲಾಗಿದೆ ಅವುಗಳಲ್ಲಿ ಒಂದು ಕೆಲಸ ಮಾಡಿಲ್ಲ ಬರಿ ಗಾಳಿಯ ಮಾತು ಆಗಿದೆ ಎಂದು ಗ್ರಾಮಸ್ಥರು ಕ್ಷೇತ್ರದ ಶಾಸಕರ ವಿರುದ್ಧ ಅಪಸ್ವರ ಕೇಳಿ ಬರುತ್ತಿವೆ. ಕರೋನಾದಿಂದ ಅವರ ಪಕ್ಷದ ಕಾರ್ಯಕರ್ತ ಸತ್ತರೆ ಮನೆ ಮನೆ ಹೋಗುವ ಶಾಸಕ ರೈತ ಆತ್ಮಹತ್ಯೆ ಮಾಡಿಕೊಂಡರು. ಕುಟುಂಬಕ್ಕೆ ಸಾಂತ್ವನ ಹೇಳದೆ ಹೋಗಿರುವುದು ಕೆಲವರಿಗೆ ಬೇಸರ ತರಿಸಿದೆ. ಇನ್ನಾದರೂ ಶಾಸಕರ ರೈತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಾರಾ ಕಾದು ನೋಡಬೇಕು.

Related