ಬೆಳಗಾವಿ : ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಬಂದ್ ನಡೆಸುತ್ತಿದ್ದೇವೆ. ಇಂತಹ ವೇಳೆಯಲ್ಲಿ ಬಸ್ ಸಂಚಾರ ವ್ಯವಸ್ಥೆ ನಡೆಸುತ್ತಾ, ನಮ್ಮ ಬಂದ್ಗೆ ವಿರೋಧ ವ್ಯಕ್ತ ಪಡಿಸಬೇಡಿ. ಬಂದ್ಗೆ ಸಹಕರಿಸಿ. “ಸಾರ್ ಬಸ್ ಸಂಚಾರ ನಿಲ್ಲಿಸಿ”. ಸರ್ಕಾರದ ರೈತ ವಿರೋಧಿ ನೀತಿಗಳಿಗೆ ಬೆಂಬಲಿಸಿ ಎನ್ನುವಂತೆ ರೈತ ಮುಖಂಡನೊಬ್ಬ ಸಾರಿಗೆ ಅಧಿಕಾರಿಯ ಕಾಲಿಗೆ ಬಿದ್ದು ಕೇಳಿಕೊಂಡ ಜಿಲ್ಲೆಯಲ್ಲಿ ಘಟನೆ ನಡೆಸಿದೆ.
ಅಂದಹಾಗೇ ಬೆಳಿಗ್ಗೆ ಸಾರಿಗೆ ಬಸ್ ನಿಲ್ದಾಣದಲ್ಲಿ ರೈತರ ಪ್ರತಿಭಟನೆ ವೇಳೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದ್ರೇ ರೈತರು ಬಸ್ ನಿಲ್ದಾಣದಿಂದ ತೆರಳಿದ ನಂತರ ಮತ್ತೆ ಬಸ್ ಸಂಚಾರ ಆರಂಭಿಸಲಾಗಿತ್ತು. ಹೀಗಾಗಿ ಮತ್ತೆ ಬಸ್ ನಿಲ್ದಾಣಕ್ಕೆ ಬಂದು ಸಾರಿಗೆ ಅಧಿಕಾರಿಯ ಕಾಲಿಗೆ ಬಿದ್ದು ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.