ಸುಳ್ಳು ಹೇಳಿಕೆ ಕೊಡೋದನ್ನ ಸಿದ್ದು ನಿಲ್ಲಿಸಬೇಕು – ಸಚಿವ ಉಮೇಶ್ ಕತ್ತಿ

ಸುಳ್ಳು ಹೇಳಿಕೆ ಕೊಡೋದನ್ನ ಸಿದ್ದು ನಿಲ್ಲಿಸಬೇಕು – ಸಚಿವ ಉಮೇಶ್ ಕತ್ತಿ

ಗದಗ, ಆ 26 :  ಬಿಂಕದಕಟ್ಟಿ ಉದ್ಯಾನ ಉದ್ಘಾಟನೆಗೂ ಮುನ್ನ ಸುದ್ದಿಗಾರರ ಜೊತೆ ಮಾತ್ನಾಡಿದ ಸಚಿವ ಉಮೇಶ್ ಕತ್ತಿ, ಭ್ರಷ್ಟಾಚಾರ ನಡೆದಿದ್ರೆ ಜನ ನಮ್ಮನ್ನ ಓಡಾಡೋದಕ್ಕೆ ಬಿಡುತ್ತಿರಲಿಲ್ಲ.. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನಾನಿದೆ ಅಂತಾ ಚರ್ಚೆ ಮಾಡ್ಬೇಕು.. ಆದ್ರೆ 40/50 ಪರ್ಸೆಂಟ್ ಅಂತಾ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು ಅಂತಾ ಚಾಟಿ ಬೀಸಿದ್ರು..

ಕೆಂಪಯ್ಯ ಯಾರು ಅನ್ನೋದು ಗೊತ್ತಿಲ್ಲ..

ಕಂಪಯ್ಯ ಯಾರು ಅನ್ನೊದು ಗೊತ್ತಿಲ್ಲ.. ಬಾಹಳ ಮಂದಿ ಅಸೋಸಿಯೇಷನ್ ಅಧ್ಯಕ್ಷರು ಇದ್ದಾರೆ.. ಅದ್ರಲ್ಲಿ ಕೆಂಪಯ್ಯ ಒಬ್ಬರು ಅಂತಾ ಕೆಂಪಯ್ಯ ವಿರುದ್ಧ ಸಚಿವ ಉಮೇಶ್ ಕತ್ತಿ ಹರಿಹಾಯ್ದರು.. ಕೆಂಪಯ್ಯ ಅವರನ್ನ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ.. ಭ್ರಷ್ಟಾಚಾರ ನಡೆದಿದ್ರೆ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ.. ಲೋಕಾಯುಕ್ತ, ಸಿಬಿಐ, ಈಡಿ.. ಎಲ್ಲಿ ಕಂಪ್ಲೆಂಟ್ ಕೊಡ್ತೀರಾ ಕೊಡಿ.. ಕುಮಾರ್ ಸ್ವಾಮಿಯಾದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು.. ಮಂತ್ರಿ, ಸರ್ಕಾರ, ನನ್ನ ವಿರುದ್ಧ ಆರೋಪ ಇದ್ರೂ ಕಂಪ್ಲೆಂಟ್ ಕೊಡಿ.. ಬಾಯಿಗೆ ಬಂದಂತೆ ಹೇಳಿ ನೀಡಿದ್ರೆ ನಿಜವಾಗುತ್ತಾ ಅಂದ್ರು..

ಉತ್ತರ ಕರ್ನಾಟಕ್ಕೆ ಅನ್ಯಾಯ ಆದ್ರೆ ರಾಜೀನಾಮೆಗೂ ಸಿದ್ಧ..!

ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೂಹ ಮಾಡಿದ್ರೆ ರಾಜೀನಾಮೆಗೆ ರೆಡಿ ಅಂತಾ ಉತ್ತರ ಕರ್ನಾಟಕ ಪರವಾಗಿ ಮತ್ತೊಮ್ಮೆ ಉಮೇಶ್ ಕತ್ತಿ ಧ್ವನಿ ಎತ್ತಿದ್ರು.. ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು.. ನೀವೂ ಉತ್ತರ ಕರ್ನಟಕ ವಿಷಯವಾಗಿ ಸ್ಪಂದಿಸ್ಬೇಕು ಅಂತಾ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ರು..  ಅಭಿವೃದ್ಧಿ ನಿಂತ್ರೆ ಹೋರಾಟ ಇದ್ದೇ ಇರುತ್ತೆ.. ಅಭಿವೃದ್ಧಿ ನಡೆದ್ರೆ ತೊಂದ್ರೆ ಇಲ್ಲ.

ಉತ್ತರ ಕರ್ನಾಟಕ ಮುಖ್ಯಮಂತ್ರಿ ಆಗಲ್ಲ.. ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ..

ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ..  ಸಿಎಂ ಅವಕಾಶ ಬಂದ್ರೆ ನಸೀಬು ನೋಡೋಣ. ಬೆನ್ನು ಹತ್ತಿ ಹೊತ್ತಿಹೋಗಲ್ಲ.. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗ್ಬೇಕು..ನಾನು ಕರ್ನಾಟಕದ ರಾಜಕಾರಣಿ, ಹಿರಿಯ ರಾಜಕಾರಣಿ ಅನುಭವ ಇದ್ದವನು.. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ.. ಭವಿಷ್ಯದಲ್ಲಿ ನೋಡೋಣ ಮದ್ರು..

Related