ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

  • In State
  • April 6, 2020
  • 386 Views
ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

ಬೆಳಗಾವಿ, ಏ. 06: ಕೊರೊ‌ನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸಾಮಾಜಿಕ‌ ಅಂತರ‌ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿದ್ರು.

ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಹುಕ್ಕೇರಿ ‌ಹಿರೇಮಠದ ಶ್ರೀ‌ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ 29ನೇ ಸವಿಚಾರ ಚಿಂತನ ಬಳಗದಿಂದ ನಿರ್ಗತಿಕರು ಹಾಗೂ ಬಡವರಿಗೆ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡಿ‌ ಅವರು ಮಾತನಾಡಿದರು.

ಕೊರೊನಾ ವೈರಸ್ ವಿರುದ್ದ ಭಾರತದ ಗೆಲ್ಲಲು ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಅವಶ್ಯಕತೆ ಇದೆ ಎಂದು ಹೇಳಿದರು.

ನೆನ್ನೆ ರಾತ್ರಿ 9 ಕ್ಕೆ ಒಂಬತ್ತು ‌ನಿಮಿಷಗಳ ಕಾಲ ಎಲ್ಲ ಮನೆಯ ದೀಪವನ್ನು ಬಂದ್ ಮಾಡಿ ಮೇಣದ ಬತ್ತಿ, ದ್ವೀಪವನ್ನು ಹಚ್ಚಲು ಪ್ರಧಾನಿ ಮೋದಿ ಅವರು‌ಕರೆ ನೀಡಿದ್ದು, ಅವರಿಗೆ ಎಲ್ಲರೂ ಸಹಕಾರ ನೀಡಿ ದೇಶದ 135 ಕೋಟಿ ಜನರು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿ ಕೊಟ್ಟಿದ್ದಾರೆ.

ಬೆಳಗಾವಿ ಉತ್ತರ ಕ್ಷೇತ್ರದ‌ ಶಾಸಕ‌ ಅನಿಲ್ ಬೆನಕೆ ಮಾತನಾಡಿ, ಕೊರೋನೊ ವೈರಸ್ ವಿರುದ್ದ ಜಾತಿ, ಭಾಷೆ‌ ಮೀರಿ‌ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು.

ಅಲ್ಪಸಂಖ್ಯಾತ ನಿಗಮ ಮಂಡಳಿಯ ಅಧ್ಯಕ್ಷ ಮುಕ್ತಾರ ಪಠಾಣ, ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ‌ ಚಂದರಗಿ, ವೀರುಪಾಕ್ಷಯ್ಯ ನೀರಲಗಿಮಠ, ಅವರವಿಂದ ಜೋಶಿ, ಅರವಿಂದ ಪಾಟೀಲ, ಮಂಜುಳಾ ಬಳ್ಳಾರಿ, ಎಂ.ವಿ.ಹಿರೇಮಠ, ಡಾ. ನಂದೀಶ,‌ಮಲ್ಲಿಕಾರ್ಜುನ ರೊಟ್ಟಿ, ಸುನೀತಾ ಪಟ್ಟಣಶೆಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related