ಕೊಪ್ಪಳ : ತಾಲೂಕಿನ ನಿಲೋಗಪುರ ಗ್ರಾಮದ ವೆಂಕಟೇಶ್ ಎಂಬ ಯುವಕ. ಆಂಜನೇಯ ಜಾತ್ರೆ ಹಿನ್ನೆಲೆ ದೇವಸ್ಥಾನ ಗೋಪುರ ಕೆಲಸ ಮಾಡುವಾಗ ವೆಂಕಟೇಶ್ ಕೈ ಜಾರಿ ಮೇಲಿಂದ ಬಿದ್ದು ಕೋಮಾ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ವೆಂಕಟೇಶ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, 16 ಲಕ್ಷ ವ್ಯಯಿಸಿದ ಪೋಷಕರಿಗೆ ಇನ್ನು ಮುಂದಿನ ಚಿಕಿತ್ಸೆಗಾಗಿ ಸಹೃದಯಿ ದಾನಿಗಳ ಆಸರೆಯನ್ನು ಪಡೆಯದೆ ನಿರ್ವಾಹವಿಲ್ಲ. ಎಲ್ಲಾ ಆಸ್ತಿಯನ್ನು ಮಾರಿ ಹಣವನ್ನೆಲ್ಲಾ ಚಿಕಿತ್ಸೆ ನೀಡಿದ ಮುಂದಿನ ಚಿಕಿತ್ಸೆಗೆ ದಾರಿ ಕಾಣದಾಗಿದೆ.
ಮಗ ಮೃತನಾದರೆ, ಆತನ ದೇಹವನ್ನು ಮೆಡಿಕಲ್ ಸೆಂಟರ್ಗೆ ದಾನ ಮಾಡುವುದಾಗಿ ಪೋಷಕರು ಕಣ್ಣೀರು ಹರಿಸಿದರು. ಯುವಕನ ಚಿಕಿತ್ಸೆಗೆ ಸಹೃದಯಿಗಳು ಮಾನವೀಯ ಹಸ್ತವನ್ನು ಚಾಚ ಬೇಕಾಗಿದೆ.
ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಫೋನ್ ಪೇ ಅಥವಾ ಗೂಗಲ್ ಪೇ – 8970556686 ಹೆಸರು ಚೈತ್ರಾ ಜಗದೀಶ್ ರಡ್ಡಿ ಅವರ ನಂಬರ್ ಗೇ ಹಣ ರ್ಗಾಯಿಸಿ ಎಂದು ಮನವಿ ಮಾಡಿದರು.