ಕರ್ತವ್ಯ ಲೋಪ, ಐವರು ಪೊಲೀಸ್ ಅಮಾನತು

ಕರ್ತವ್ಯ ಲೋಪ, ಐವರು ಪೊಲೀಸ್ ಅಮಾನತು

ವಿಜಯಪುರ : ಗುಮ್ಮಟನಗರಿ ನೂತನ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾ ಪೊಲೀಸ್‌ರಿಗೆ ಬಿಸಿ ಮುಟ್ಟಿಸಿದ್ದಾರೆ.

ಕರ್ತವ್ಯ ಲೋಪ, ಬೇಜವಾಬ್ದಾರಿ ಹಿನ್ನೆಲೆ ನಿಡಗುಂದಿ ಹಾಗೂ ಬಸವನಬಾಗೇಬಾಡಿ ಪೊಲೀಸ್ ಠಾಣೆಯ ಐವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ನಿಡಗುಂದಿ ಪೊಲೀಸ್ ಠಾಣಾ ಎಸ್.ಸಿ.ರೆಡ್ಡಿ ಸಿಪಿಸಿ 496 ಹಾಗೂ ಐ.ಜಿ ಹೊಸಗೌಡರ ಸಿಪಿಸಿ 1666 ಅಮಾನತುಗೊಂಡವರು. ಮತ್ತೊಂದು ಬ

ಸವನಬಾಗೇಬಾಡಿ ಪೊಲೀಸ್ ಠಾಣೆಯ ಐ.ಎಂ ಮಕಾಂದಾರ ಸಿಪಿಸಿ 1560, ಆರ್.ಎಲ್ ರಾಠೋಡ ಸಿಪಿಸಿ 568 ಹಾಗೂ ಎಂ.ಎಂ ಯಾಳಗಿ ಸಿಎಚ್ ಸಿ 1327 ಅಮಾನತುಗೊಂಡಿದ್ದಾರೆ.

ಜಿಲ್ಲಾದ್ಯಂತ ಪೊಲೀಸ್ ಇಲಾಖೆಯ ಅಧಿಕಾರಿಗಳ ಮೇಲೆ ಎಸ್ಪಿ ಆನಂದಕುಮಾರ ಹದ್ದಿನ ಕಣ್ಣಿಟ್ಟಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಕ್ಷಿ ಸಿಕ್ರೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತಿರುವುದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

Related