ಬಸ್ ಡಿಕ್ಕಿ : ಚಾಲಕ ಸಾವು

ಬಸ್ ಡಿಕ್ಕಿ : ಚಾಲಕ ಸಾವು

ಕೊಚ್ಚಿ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೊಚ್ಚಿ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ.

ತಿರುವನಂತಪುರಂ ನಿಂದ ಕೋಝಿಕೋಡ್ ಗೆ ತೆರಳುತ್ತಿದ್ದ ಸೂಪರ್ ಡೀಲಕ್ಸ್ ಬಸ್ಸು ಸೋಮವಾರ ಮುಂಜಾನೆ ಕೊಚ್ಚಿ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಚಾಲಕ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅದರಲ್ಲಿ ಬಸ್ಸಿನ ನಿರ್ವಾಹಕ ಹಾಗೂ ಇಬ್ಬರು ಪ್ರಯಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ಸು ಇನ್ನು 2 ಕಿಲೋಮೀಟರ್ ಸಂಚರಿಸಿದರೆ ವೈಟಿಲ್ಲಾ ಬಸ್ಸು ನಿಲ್ದಾಣ ಸೇರುತ್ತಿತ್ತು ಅಲ್ಲಿ 5ರಿಂದ 10ನಿಮಿಷಗಳ ಕಾಲ ವಿಶ್ರಾಂತಿಗೆ ನಿಲ್ಲಿಸುತ್ತಿದ್ದರು ಅದಕ್ಕೆ ಮೊದಲೇ ಅಪಘಾತ ಸಂಭವಿಸಿದೆ ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಿಂದ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

Related