ಕಿರುಕುಳಕ್ಕೆ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನ

ಕಿರುಕುಳಕ್ಕೆ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನ

ವಿಜಯಪುರ : ಇಂಡಿ ತಾಲೂಕಿನ ಎನ್‌ಇಕೆಆರ್ ಟಿ.ಸಿ ಇಂಡಿ ಘಟಕದಲ್ಲಿ ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಚಾಲಕನೊಬ್ಬ ಡೀಪೋ ಆವರಣದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.

ಸಾರಿಗೆ ಸಂಸ್ಥೆ ಇಂಡಿ ಘಟಕದ ಕಚೇರಿ ಎದುರು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಚಾಲಕನನ್ನು ಸರ್ಪರಾಜ ಪಟೇಲ್ ಎಂದು ಗುರುತಿಸಲಾಗಿದೆ.

ಮೇಲಾಧಿಕಾರಿಗಳ ಕಿರುಕುಳದಿಂದ ಬೇಸರಗೊಂಡು ಡೀಪೋ ಎದುರೇ ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅಸ್ವಸ್ಥಗೊಂಡ ಸರ್ಫರಾಜನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Related