ದೀಪಾವಳಿ ದಿನವೇ ದುರ್ಘಟನೆ!

ದೀಪಾವಳಿ ದಿನವೇ ದುರ್ಘಟನೆ!

 ಬೆಂಗಳೂರು :   ಬೆಂಗಳೂರಿನಲ್ಲಿ  ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, ಹಸಿರು ಪಟಾಕಿ ಹೆಸರಲ್ಲಿ ಮಾಮೂಲಿ ಪಟಾಕಿ  ಭರಾಟೆ ಜೋರಾಗಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಜಾಗರೂಕತೆಯ ಕಾರಣ ಕೆಲವರು ಗಾಯಗೊಳ್ಳುತ್ತಾರೆ. ಅನೇಕರು ಕಣ್ಣು ಕಳೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ನಿನ್ನೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಆಸ್ಪತ್ರೆಯಲ್ಲಿ ನಾಲ್ವರು ಹಾಗೂ ನೇತ್ರ ಧಾಮದಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಜಯಾನಂದ ನಗರದಲ್ಲಿ 12 ವರ್ಷದ ಬಾಲಕ ಹೂವಿನ ಕುಂಡ ಹಚ್ಚುವಾಗ ಕಣ್ಣಿಗೆ ಹಾನಿಯಾಗಿದ್ದು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗಿದೆ.

Related