ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಹೆಚ್ಚಯಾಗುತ್ತಿದ್ದು, ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ಬಿಗಿ ಲಾಕ್ಡೌನ್ ಮಾಡಲಾಗಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಅನಗತ್ಯ ಬೈಕ್ಗಳಲ್ಲಿ ಸುತ್ತಾಟ ನಡೆಸುವ ಜನರಿಗೆ ವಾಹನ ಜಪ್ತಿ ಸೇರಿ ದಂಡ ಹಾಕುತ್ತಿದ್ದಾರೆ. ಇನ್ನೂ ಹಗಲಿರುಳು ಕಾರ್ಯ ನಿರತ ಪೊಲೀಸ್ ತಂಡಕ್ಕೆ ನಗರದ ಹಲವು ಸಂಘ ಸಂಸ್ಥೆಗಳು ತಂಪು ಪಾನೀಯ, ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಿ ಸಾಮಾಜಿಕ ಕಳಕಳಿ ತೋರುತ್ತಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಪಿ ಶ್ರೀಧರ್, ಡಿಎಸ್ಪಿ ಗೀತಾ ಹಾಗೂ ಸಿಪಿಐಗಳಾದ ರವಿ ಉಕ್ಕುಂದ, ಮೌನೇಶ್ವರ ಪಾಟೀಲ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳ ತಂಡವು ವಿವಿಧ ರಸ್ತೆಗಳಲ್ಲಿ ನಿಂತು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಪೂರ್ಣ ಲಾಕ್ಡೌನ್ಗೆ ಉತ್ತಮ ಸ್ಪಂದನೆಯ ವ್ಯಕ್ತವಾಗಿವೆ.